WPL 2023: ಆರ್ಸಿಬಿ ಸೇರಿಕೊಂಡ ಬಳಿಕ ಸ್ಮೃತಿ ಮಂದಣ್ಣ ಮಾಡಿದ ಮೊದಲ ಕೆಲಸವೇನು ಗೊತ್ತೆ?? ಒಂದು ಕ್ಷಣ ಹೃದಯನೆ ನಿಂತದ್ದು ಯಾಕೆ ಗೊತ್ತೇ?
WPL 2023: ಈ ವರ್ಷ ವುಮನ್ಸ್ ಪ್ರೀಮಿಯರ್ ಲೀಗ್ ಶುರುವಾಗಲಿದ್ದು, ಎಲ್ಲರ ಕುತೂಹಲ ಯಾವ ಆಟಗಾರ್ತಿಯರು ಯಾವ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎನ್ನುವುದಾಗಿತ್ತು. WPL ನ ಮೆಗಾ ಹರಾಜು ನಿನ್ನೆಯಷ್ಟೇ ನಡೆದಿದ್ದು, ನಮ್ಮ ಆರ್ಸಿಬಿ ತಂಡವು ಟೀಮ್ ಇಂಡಿಯಾ ವುಮನ್ಸ್ ನ ಸ್ಟಾರ್ ಪ್ಲೇಯರ್ ಆಗಿರುವ ಸ್ಮೃತಿ ಮಂಧನ ಅವರನ್ನು ಖರೀದಿ ಮಾಡಿದೆ. ಎಲ್ಲಾ ಅಭಿಮಾನಿಗಳು ಸ್ಮೃತಿ ಅವರನ್ನು ಆರ್ಸಿಬಿ ತಂಡ ಖರೀದಿ ಮಾಡಬೇಕು ಎಂದು ಆಸೆಪಟ್ಟಿದ್ದರು, ಅದೇ ರೀತಿ ಆರ್ಸಿಬಿ ತಂಡ ಸ್ಮೃತಿ ಮಂಧನ ಅವರನ್ನು ತಂಡಕ್ಕೆ ತಂದಿದೆ.
ಸ್ಮೃತಿ ಮಂಧನ ಅವರಿಗಾಗಿ ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ತಂಡದ ನಡುವೆ ಪೈಪೋಟಿ ಇತ್ತು, 3.40 ಕೋಟಿ ಕೊಟ್ಟು ಆರ್ಸಿಬಿ ತಂಡ ಸ್ಮೃತಿ ಮಂಧನ ಅವರನ್ನು ಖರೀದಿ ಮಾಡಿದೆ. ಸ್ಮೃತಿ ಅವರು ಆರ್ಸಿಬಿ ಪಾಲಾಗುತ್ತಿದ್ದ ಹಾಗೆ ದೊಡ್ಡ ಸಂಭ್ರಮವೇ ಮನೆಮಾಡಿದೆ, ಆರ್ಸಿಬಿ ತಂಡಕ್ಕೆ ಆಯ್ಕೆಯಾದ ಬಳಿಕ ಸ್ಮೃತಿ ಮಂಧನ ಅವರು ಮಾಡಿರುವ ಅದೊಂದು ಕೆಲಸ ಎಲ್ಲರ ಗಮನ ಸೆಳೆದಿದೆ, ಆರ್ಸಿಬಿ ಮಾಡಿರುವ ಟ್ವೀಟ್ ಗೆ ರಿಪ್ಲೈ ಮಾಡಿರುವ ಸ್ಮೃತಿ ಅವರು, ‘ನಮಸ್ಕಾರ ಬೆಂಗಳೂರು..’ ಎಂದು ಬರೆದು, ಕರ್ನಾಟಕದ ಬಾವುಟದ ಸಂಕೇತ ಆಗಿರುವ ಹಳದಿ ಮತ್ತು ಕೆಂಪು ಬಣ್ಣದ ಹಾರ್ಟ್ ಎಮೋಜಿ ಕೂಡ ಹಾಕಿದ್ದಾರೆ, ಇದನ್ನು ನೋಡಿ ಆರ್ಸಿಬಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನು ಓದಿ..Kannada News: ಯೋಗ ಮಾಡುತ್ತಿದ್ದಾರಾ?? ಅಥವಾ ಮಾರ್ಟಿಯಲ್ ಆರ್ಟ್ಸ್ ಹಾ?? ಅಂದವನ್ನು ಹೊರಗಿಟ್ಟು, ಪಡ್ಡೆ ಹುಡುಗರ ಕಣ್ಣನ್ನು ತಂಪು ಮಾಡಿದ ಕೀರ್ತಿ. ಹೇಗಿದೆ ಗೊತ್ತೇ?

ಸ್ಮೃತಿ ಮಂಧನ ಅವರಿಗೆ ಆರ್ಸಿಬಿ ತಂಡದ ಕಡೆಯಿಂದ ಮತ್ತು ಅಭಿಮಾನಿಗಳ ಕಡೆಯಿಂದ ಬಹಳ ಪ್ರೀತಿಯ ಸ್ವಾಗತ ಸಿಕ್ಕಿದೆ. ಸ್ಮೃತಿ ಅವರ ಕೆರಿಯರ್ ಬಗ್ಗೆ ನೋಡುವುದಾದರೆ, 2013ರಲ್ಲಿ ಇವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟರು, ಬಹಳ ಸಾಧನೆ ಮಾಡಿರುವ ಸ್ಮೃತಿ ಅವರು 2018ರಲ್ಲಿ ಐಸಿಸಿ ಮಹಿಳಾ ಆಟಗಾರ್ತಿ ಎನ್ನಿಸಿಕೊಂಡರು, 2021 ಹಾಗೂ 2022ರಲ್ಲಿ ಐಸಿಸಿ ವರ್ಷದ ಟಿ20 ಆಟಗಾರ್ತಿಯಾಗಿ ಹೆಸರು ಪಡೆದಿದ್ದಾರೆ. ಈಗ ಸ್ಮೃತಿ ಅವರು ಇಂಡಿಯಾ ವುಮೆನ್ಸ್ ಟೀಮ್ ನ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಇದುವರೆಗೂ ಆಡಿರುವ 112 ಟಿ20 ಪಂದ್ಯಗಳಲ್ಲಿ 20 ಶತಕ ಸೇರಿದಂತೆ ಬರೋಬ್ಬರಿ 2651 ರನ್ಸ್ ಗಳಿಸಿದ್ದಾರೆ. ಆರ್ಸಿಬಿ ತಂಡಕ್ಕೆ ಸ್ಮೃತಿ ಅವರು ಕ್ಯಾಪ್ಟನ್ ಆಗ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಧರೆಗಿಳಿಸಿದ ಅಪ್ಸರೆಯಂತೆ ಇರುವ ಕಿಯಾರ ಯಾಕೆ ಶಾಲ್ ಧರಿಸುತ್ತಿದ್ದಾರೆ?? ನೆಟ್ಟಿಗರು ಶಾಕ್ ಆಗಿದ್ದು ಯಾಕೆ ಗೊತ್ತೇ??
Comments are closed.