Kannada News: ಹೊಸ ಸಿನೆಮಾಗೆ ನಿಜಕ್ಕೂ ಹಿಂದಿಯಿಂದ ಅಪ್ಸರೆಯನ್ನು ಕರೆತಂದ ವಿನಯ್ ರಾಜ್ ಕುಮಾರ್; ಈಕೆಯನ್ನು ನೋಡಲು ಕ್ಯೂ ನಲ್ಲಿ ನಿಲ್ಲುತ್ತಾರೆ. ಯಾರು ಗೊತ್ತೇ?
Kannada News: ವಿನಯ್ ರಾಜ್ ಕುಮಾರ್ ಅವರು ಡಾ.ರಾಜ್ ಕುಮಾರ್ ಅವರ ಮೊಮ್ಮಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇಂದು ಭರವಸೆಯ ನಟ ಎನ್ನಿಸಿಕೊಂಡಿದ್ದಾರೆ. ಒಂದು ದೊಡ್ಡ ಬ್ರೇಕ್ ಗಾಗಿ ಕಾಯುತ್ತಿದ್ದರು ಸಹ ವಿನಯ್ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿದೆ. ಇದೀಗ ವಿನಯ್ ಅವರು ನಿರ್ದೇಶಕ ಸಿಂಪಲ್ ಸುನಿ ಅವರೊಡನೆ ಒಂದು ಸಿನಿಮಾ ಮಾಡುತ್ತಿದ್ದು, ಇದರ ಮುಹೂರ್ತ ಇತ್ತೀಚೆಗೆ ನಡೆಯಿತು. ಸಿನಿಮಾದ ಮೊದಲ ಹಂತದ ಚಿತ್ರೀಕರಣ ಸಹ ಮುಗಿದಿದೆ.
ಸಿನಿಮಾದ ಟೈಟಲ್ ಇನ್ನು ಫಿಕ್ಸ್ ಆಗಿಲ್ಲ, ಆದರೆ ಈ ಸಿನಿಮಾ ಬಗ್ಗೆ ಭರ್ಜರಿಯಾದ ಅಪ್ಡೇಟ್ ಸಿಕ್ಕಿದೆ. ಸಿನಿಮಾಗೆ ಹೀರೋಯಿನ್ ಯಾರು ಎಂದು ಈಗ ತಿಳಿದುಬಂದಿದ್ದು, ರಾಧೆ ಕೃಷ್ಣ ಧಾರವಾಹಿಯಲ್ಲಿ ಮುದ್ದಾಗಿ ರಾಧೆ ಪಾತ್ರದಲ್ಲಿ ನಟಿಸಿದ್ದ ಮಲ್ಲಿಕಾ ಸಿಂಗ್ ಅವರು ವಿನಯ್ ರಾಜ್ ಕುಮಾರ್ ಮತ್ತು ಸಿಂಪಲ್ ಸುನಿ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಆದರೆ ಇದರ ಬಗ್ಗೆ ಚಿತ್ರತಂಡದಿಂದ ಇನ್ನು ಅಧಿಕೃತವಾದ ಮಾಹಿತಿ ಸಿಕ್ಕಿಲ್ಲ. ಇದನ್ನು ಓದಿ..Pooja Hegde: ಕೊನೆಗೂ ಬಯಲಾಯ್ತು ಕಾರಣ: ಪೂಜೆ ಹೆಗ್ಡೆ ಗಾಗಿ 2 ಕೋಟಿ ಕೊಟ್ಟು ಕಾರು ಖರೀದಿ ಮಾಡಿದ ನಿರ್ದೇಶಕ. ತೆರೆ ಹಿಂದೆ ನಡೆದ ಕಾರಣ ಏನು ಗೊತ್ತೇ?

ಮಲ್ಲಿಕಾ ಸಿಂಗ್ ಅವರು ರಾಧೆ ಕೃಷ್ಣ ಧಾರವಾಹಿಯ ಮೂಲಕ, ತಮ್ಮ ಕ್ಯೂಟ್ನೆಸ್ ಇಂದ ದೇಶಾದ್ಯಂತ ಸುದ್ದಿಯಾಗಿದ್ದರು. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಈ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾದ ಕಾರಣ, ಮಲ್ಲಿಕಾ ಅವರಿಗೆ ಕನ್ನಡದಲ್ಲೂ ಒಳ್ಳೆಯ ಅಭಿಮಾನಿ ಬಳಗ ಇದೆ. ಇದೀಗ ಇವರು ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರೆ, ಗಲ್ಲಿ ಬಾಯ್ ಸಿನಿಮಾ ಮೂಲಕ ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ ಮಲ್ಲಿಕಾ. ವಿನಯ್ ರಾಜ್ ಕುಮಾರ್ ಅವರ ಜೊತೆಗಿನ ಸಿನಿಮಾದಲ್ಲಿ ಕಾಶ್ಮೀರಿ ಹುಡುಗಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಇದನ್ನು ಓದಿ..Kannada News: ನೇರವಾಗಿ ಬಾಲಯ್ಯ ರವರಿಗೆ ಅನ್ನಬಾರದ ಮಾತುಗಳನ್ನು ಹೇಳಿ ಬಿಟ್ಟ ರಾಮ್ ಗೋಪಾಲ್ ವರ್ಮಾ: ಬಾಲಯ್ಯ ಬಗ್ಗೆ ಕೆಳಮಟ್ಟದಲ್ಲಿ ಹೇಳಿದ್ದೇನು ಗೊತ್ತೇ?
Comments are closed.