Kannada News: ರಾತ್ರಿಯಾಗಿತ್ತು, ದಾರಿ ಕಾಣದೆ ಅಳುತ್ತ ನಿಂತಿದ್ದ ಹುಡುಗಿಗೆ ಆಟೋ ಚಾಲಕ ಸೈಲೆಂಟ್ ಆಗಿ ಬಂದು ಏನು ಮಾಡಿದ್ದಾನೆ ಗೊತ್ತೇ?
Kannada News: ಜೀವನದಲ್ಲಿ ಕೆಲವೊಮ್ಮೆ ನಾವು ಅಂದುಕೊಂಡಿದ್ದಕ್ಕಿಂತ ವಿಭಿನ್ನವಾದ ಘಟನೆಗಳು ನಡೆಯುತ್ತದೆ. ಅದನ್ನು ನಾವು ಊಹೆ ಕೂಡ ಮಾಡಿರುವುದಿಲ್ಲ. ಅದರಿಂದ ನೋವು ಕೂಡ ಆಗಬಹುದು. ಹೀಗೆ ಒಬ್ಬ ತಂದೆ ತಾಯಿಗೆ ಬಹಳ ನೋವು ನೀಡಿದಂಥ ಘಟನೆ ಒಂದು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. ಚಾಮರಾಜಪೇಟೆಯಲ್ಲಿ ತಮ್ಮ ಮಗಳು ಕಾಲೇಜಿಗೆ ಹೋಗಿ ಇನ್ನು ಬರಲಿಲ್ಲ ಎಂದು ಕಾದು ಕುಳಿತಿದ್ದರು. ರಾತ್ರಿಯಾದರು ಇವರ ಮಗಳು ಮನೆಗೆ ಬರಲೇ ಇಲ್ಲ. ಮನೆಯಲ್ಲಿದ್ದ ತಂದೆ ತಾಯಿಗೆ ಆತಂಕ ಹೆಚ್ಚಾಯಿತು.
ಮಗಳು ಇನ್ನು ಮನೆಗೆ ಬರಲಿಲ್ಲ ಎಂದು ಭಯದಲ್ಲಿ ಪೊಲೀಸರಿಗೂ ಕಂಪ್ಲೇಂಟ್ ನೀಡಿದರು. ಪೊಲೀಸರು ಕೂಡ ಈ ಹುಡುಗಿಗಾಗಿ ಹುಡುಕಾಟ ನಡೆಸುವುದಕ್ಕೆ ಶುರು ಮಾಡಿದರು. ಮತ್ತೊಂದು ಕಡೆ ಒಬ್ಬ ಆಟೋ ಡ್ರೈವರ್ ಅಂದು ತಡರಾತ್ರಿ ತನ್ನ ಕೆಲಸ ಮುಗಿಸಿ, ಮನೆಗೆ ಹೋಗುವಾಗ, ರಸ್ತೆಯಲ್ಲಿ ಒಂದು ಹುಡುಗಿ ಅಳುತ್ತಾ ನಿಂತಿರುವುದನ್ನು ನೋಡುತ್ತಾನೆ, ಈ ಹುಡುಗಿ ಇಷ್ಟು ಹೊತ್ತಲ್ಲಿ ಯಾಕೆ ಹೀಗೆ ನಿಂತಿದೆ? ಈ ಹೊತ್ತಲ್ಲಿ ಬೇರೆ ಯಾರಾದರೂ ನೋಡಿದರೆ ಅವರು ನೋಡುವ ದೃಷ್ಟಿಯೇ ಬೇರೆ ರೀತಿ ಇರುತ್ತಿದೆ, ಈ ಹುಡುಗಿಗೆ ತೊಂದರೆ ಆಗಬಹುದು ಎಂದು ಆಕೆಯ ಬಳಿ ಹೋಗಿ ಏನಾಯಿತಮ್ಮ, ಯಾಕೆ ಹೀಗೆ ಅಳುತ್ತಾ ನಿಂತಿದ್ದೀಯಾ ಎಂದು ಕೇಳುತ್ತಾನೆ. ಇದನ್ನು ಓದಿ..Facts in Kannada: ಬಹುತೇಕ ಜನರು ವಾಹನಗಳ ಮೇಲೆ ಹಾಕಿಕೊಳ್ಳುವ ಈ ಹನುಮಾನ್ ಸ್ಟಿಕರ್ ಬಗ್ಗೆ ಯಾರಿಗೂ ತಿಳಿಯದ ಒಂದು ವಿಚಾರ ಏನು ಗೊತ್ತೇ??

ಆಗ ಆ ಹುಡುಗಿ ತಾನು ಕಳೆದುಹೋಗಿದ್ದೇನೆ ಎಂದು ಹೇಳುತ್ತಾಳೆ, ಆಗ ಆಟೋ ಡ್ರೈವರ್ ನಿಮ್ಮ ಮನೆ ಎಲ್ಲಿ ಹೇಳಮ್ಮ ನಾನು ಬಿಡುತ್ತೇನೆ ಎಂದು ಕೇಳಿ, ಅಡ್ರೆಸ್ ತಿಳಿದುಕೊಂಡು ಆಕೆಯನ್ನು ಸೇಫ್ ಆಗಿ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಾನೆ, ಮನೆಯವರಿಗೆ ಆಗ ಸಮಾಧಾನ ಆಗುತ್ತದೆ. ಆಕೆಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೂ ನೆಮ್ಮದಿಯಾಗುತ್ತದೆ. ಈ ಹುಡುಗಿಯನ್ನು ಸೇಫ್ ಆಗಿ ಮನೆಗೆ ಕರೆದುಕೊಂಡು ಹೋಗಿ ಬಿಟ್ಟ ಆಟೋ ಡ್ರೈವರ್ ಹೆಸರು ವಿಜಯ್ ಕುಮಾರ್. ಹೆಣ್ಣನ್ನು ಕಂಡರೆ ಬೇರೆ ರೀತಿಯಲ್ಲಿ ನೋಡುವವರ ನಡುವೆ ವಿಜಯ್ ಕುಮಾರ್ ಅವರು ಇಷ್ಟು ಒಳ್ಳೆಯ ಕೆಲಸ ಮಾಡಿರೋದಕ್ಕೆ, ಪೊಲೀಸರು ಅವರಿಗೆ ಮೆಚ್ಚುಗೆ ನೀಡಿದರು. ಇದನ್ನು ಓದಿ..Kannada News:ಪ್ರೀತಿ ಮಾಡಿದರೆ, ಈ ಮೂರು ಹೆಸರಿನ ಹುಡುಗಿಯರನ್ನು ಪ್ರೀತಿ ಮಾಡಿ. ಮೋಸ ಮಾಡುವುದೇ ಇಲ್ಲ, ಪಕ್ಕ ಮದುವೆಯಾಗ್ತಾರೆ. ಯಾರು ಗೊತ್ತೇ ?
Comments are closed.