Kannada News: ಯಾವುದಾದರೂ ಒಂದು ಸಿನಿಮಾ ಸೋತರೆ, ವಿಷ್ಣು ರವರು ಏನು ಮಾಡುತ್ತಿದ್ದರು ಗೊತ್ತೇ?? ಸೋತರೆ ಹೀಗಾ ಮಾಡೋದು??
Kannada News: ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ ಎಂದು ಕರೆಯುತ್ತಾರೆ. ವಿಷ್ಣುದಾದ ಅವರನ್ನು ಕಂಡರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ, ಇಂದು ಅವರು ನಮ್ಮೊಡನೆ ಇಲ್ಲದೆ ಹೋದರು ಸಹ, ಮಕ್ಕಳಿಂದ ಹಿರಿಯರವರೆಗು ಎಲ್ಲರು ದಾದ ಅವರನ್ನು ಇಷ್ಟಪಡುತ್ತಾರೆ. ಇವರು ನಟಿಸಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು, ಒಂದು ವೇಳೆ ತಮ್ಮ ಸಿನಿಮಾ ಹಿಟ್ ಆಗದೆ ಹೋದರೆ ವಿಷ್ಣು ದಾದ ಅವರು ಏನು ಮಾಡುತ್ತಿದ್ದರು ಗೊತ್ತಾ?

ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ವಂಶವೃಕ್ಷ, ಆದರೆ ನಾಗರಹಾವು ಸಿನಿಮಾ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಗುರುತಿಸಿಕೊಂಡರು. ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿತ್ತು, ಆಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಆ ಲುಕ್ ಗೆ ಪರ್ಫೆಕ್ಟ್ ಎಂದರೆ ವಿಷ್ಣು ದಾದ ಅವರೇ ಎಂದು ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಅಂದಿನಿಂದ ವಿಷ್ಣು ದಾದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ತಮ್ಮ ವೃತ್ತಿ ಜೀವನದಲ್ಲಿ 200 ಸಿನಿಮಾಗಳಲ್ಲಿ ನಟಿಸಿದರು. ಇದನ್ನು ಓದಿ..Kannada News: ಇನ್ನು ಚಿಕ್ಕ ವಯಸ್ಸಿನಲ್ಲಿಯೇ ಟ್ಯಾಲೆಂಟ್ ತೋರಿಸಿ ಇಬ್ಬರನ್ನು ಪಟಾಯಿಸಿಕೊಂಡ ಶುಭಮ್: ಮತ್ತೊಬ್ಬರು ಪ್ರೀತಿಯ ಬಲೆಗೆ. ಯಾರು ಗೊತ್ತೇ?
ಒಬ್ಬ ನಟನಾಗಿ ಅವರು ಎಂಥ ಶ್ರೇಷ್ಠ ನಟ ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾವುದೇ ಪಾತ್ರವಾದರು, ಪರಕಾಯ ಪ್ರವೇಶ ಮಾಡಿ ನಟನೆ ಮಾಡುತ್ತಿದ್ದರು. ಊರಿನ ಗೌಡರ ಪಾತ್ರದಲ್ಲಿ ವಿಷ್ಣುದಾದ ಅವರು ನಟಿಸುತ್ತಿದ್ದ ಹಾಗೆ ಮತ್ಯಾರು ಕೂಡ ನಟಿಸುವುದಿಲ್ಲ ಎನ್ನುವ ಅಭಿಪ್ರಾಯ ಕೂಡ ಕೇಳಿ ಬರುತ್ತಿದ್ದವು. ಅವರ ಸಿನಿಮಾ ಟೈಟಲ್ ಗಳು ಕೂಡ ಅವರ ನಿಜ ಜೀವನದ ಸ್ವಭಾವದ ರೀತಿಯಲ್ಲೇ ಇರುತ್ತಿತ್ತು.
ವಿಷ್ಣುದಾದ ಅವರ ಸಿನಿಮಾಗಳಲ್ಲಿ ಒಂದು ಹೆಣ್ಣಿಗೆ ಗೌರವ ಕೊಡುವುದು ಹೇಗೆ ಎಂದು ಅಚ್ಚುಕಟ್ಟಾಗಿ ತೋರಿಸಲಾಗುತ್ತಿತ್ತು. ನಿಜ ಜೀವನದಲ್ಲು ಅಷ್ಟೇ, ಹೆಣ್ಣುಮಕ್ಕಳಿಗೆ ಬಹಳ ಗೌರವ ಕೊಡುತ್ತಿದ್ದರು. ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಅತಿದೊಡ್ಡ ಮಟ್ಟದಲ್ಲಿ ಮಹಿಳಾ ಅಭಿಮಾನಿ ಬಳಗ ಹೊಂದಿದ್ದ ನಟ ಎನ್ನಿಸಿಕೊಂಡಿದ್ದರು ವಿಷ್ಣುವರ್ಧನ್ ಅವರು. ಹಾಗೆಯೇ ವಿಷ್ಣುವರ್ಧನ್ ಅವರಿಗೆ ಇದ್ದ ಆಧ್ಯಾತ್ಮದ ಜ್ಞಾನದ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಚಿತ್ರರಂಗದಲ್ಲಿದ್ದರು ಅವರಿಗೆ ದೇವರ ಮೇಲೆ ಭಕ್ತಿ ಮುಂದಿನ ಹಂತದಲ್ಲಿದ್ದು. ಇದನ್ನು ಓದಿ..Kannada Story: ಮದುವೆಯಾಗಿದ್ದರೂ ಗಂಡನ್ನು ದೂರ ತಳ್ಳಿ, ಹಳೆಯ ಬಾಯ್ ಫ್ರೆಂಡ್ ಜೊತೆ ಫಾರ್ಮ್ ಹೌಸ್ ಅಲ್ಲಿ ಸಿಕ್ಕಿಬಿಟ್ಟ ಸ್ಟಾರ್ ಹೀರೋ ಮಗಳು. ಏನಾಗುತ್ತಿದೆ ಗೊತ್ತೇ?
ಆಧ್ಯಾತ್ಮದ ಕಡೆಗೆ ಒಲವು ಇದ್ದ ಕಾರಣ ವಿಷ್ಣುದಾದ ಅವರು ಹೋಗುವ ಕೆಲವು ವರ್ಷಗಳ ಹಿಂದಿನಿಂದಲು ಬಿಳಿ ಬಟ್ಟೆಗಳನ್ನೇ ಧರಿಸುತ್ತಿದ್ದರು. ವೃತ್ತಿ ಜೀವನದಲ್ಲಿ ಸೋಲು ಗೆಲುವು ಎಲ್ಲವನ್ನು ಸಮನಾಗಿ ನೋಡುತ್ತಿದ್ದರು. ವಿಷ್ಣುವರ್ಧನ್ ಅವರ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು, ಆದರೆ ಕೆಲವು ಸಿನಿಮಾಗಳು ಉತ್ತಮ ಯಶಸ್ಸು ಪಡೆಯುತ್ತಿರಲಿಲ್ಲ. ಒಂದು ವೇಳೆ ಸಿನಿಮಾಗಳು ಚೆನ್ನಾಗಿ ಹೋಗಲಿಲ್ಲ ಎನ್ನುವ ವಿಚಾರ ಗೊತ್ತಾದರೆ ಆ ಅವರು ಏನು ಮಾಡುತ್ತಿದ್ದರು ಗೊತ್ತಾ?

ಒಂದು ವೇಳೆ ಸಿನಿಮಾ ಚೆನ್ನಾಗಿ ಹೋಗದೆ, ನಿರ್ಮಾಪಕರಿಗೆ ತೊಂದರೆ ಆಗುವ ಹಾಗೆ ಇದೆ ಎಂದು ಅನ್ನಿಸಿದರೆ, ತಾವು ಆ ಸಿನಿಮಾಗೆ ಸಂಭಾವನೆಯನ್ನೇ ತೆಗೆದುಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲದೆ, ತಮ್ಮ ಹಣದಿಂದ ನಿರ್ಮಾಪಕರಿಗೆ ಸಹಾಯ ಮಾಡುತ್ತಿದ್ದರು. ಇಂತಹ ಒಳ್ಳೆಯ ಗುಣ ಹೊಂದಿರುವ ವ್ಯಕ್ತಿ. ವಿಷ್ಣು ದಾದ ಅವರು. ಇಂತಹ ಮನಸ್ಸು ವ್ಯಕ್ತಿತ್ವ ಇರುವ ವ್ಯಕ್ತಿ ಸಿಗುವುದು ಬಹಳ ಕಡಿಮೆ ಎಂದು ಹೇಳಬಹುದು. ಇದನ್ನು ಓದಿ..Kannada News: ರಶ್ಮಿಕಾ ಹಿಂದೆ ಬಿಟ್ಟ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ: ಇಬ್ಬರ ಜೊತೆ ಸಾಲದು ಎಂದು ಮೂರನೇ ಹುಡುಗಿಯಾಗಿ ರಶ್ಮಿಕಾ. ಯಾರು ಗೊತ್ತೇ??
Comments are closed.