WPL 2023: ಸತತ ಮೂರನೇ ಪಂದ್ಯ ಸೋತ ತಕ್ಷಣ, ನೇರವಾಗಿ ಸ್ಮೃತಿ ಮಂದನಾ ಹೇಳಿದ್ದೇನು ಗೊತ್ತೇ? ದೂರಿದ್ದು ಯಾರನ್ನು ಗೊತ್ತೇ??
WPL 2023: ಮಹಿಳಾ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಈ ಬಾರಿ WPL ನಲ್ಲಿ ಆರ್ಸಿಬಿ ತಂಡ ಕಪ್ ಗೆಲ್ಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಏಕೆಂದರೆ ತಂಡ ಅಂತಹ ಆಟಗಾರ್ತಿಯರನ್ನು ಆಯ್ಕೆ ಮಾಡಿಕೊಂಡಿತ್ತು, ಆದರೆ ಟೂರ್ನಿ ಶುರುವಾದ ನಂತರ ಇದೆಲ್ಲವೂ ಸುಳ್ಳಾಗಿದೆ. ಆರ್ಸಿಬಿ ತಂಡ ಲೀಗ್ ಹಂತದಲ್ಲಿ ಈವರೆಗೂ ಆಡಿರುವ ಮೂರು ಪಂದ್ಯಗಳನ್ನು ಕೂಡ ಸೋತು, ಲೀಗ್ ಇಂದಲೇ ಹೊರಹೋಗುವ ಹಾಗೆ ಕಾಣುತ್ತಿದೆ. ಬುಧವಾರ ನಡೆದ ಆರ್ಸಿಬಿ ವರ್ಸಸ್ ಗುಜರಾತ್ ಜೈನ್ಟ್ಸ್ ಪಂದ್ಯದಲ್ಲಿ ಆರ್ಸಿಬಿ ತಂಡದ ಬ್ಯಾಟಿಂಗ್ ಪ್ರದರ್ಶನ ಚೆನ್ನಾಗಿಯೇ ಇತ್ತಾದರು, ಬೌಲಿಂಗ್ ನಲ್ಲಿ ಸಮಸ್ಯೆ ಹಾಗೆಯೇ ಇದೆ.
ಮೊದಲ ಎರಡು ಪಂದ್ಯಗಳಲ್ಲಿ ಆರ್ಸಿಬಿ ಟೀಮ್ ಬೌಲರ್ ಗಳು 3 ವಿಕೆಟ್ಸ್ ಅಷ್ಟೇ ಪಡೆದರು, ಮೂರನೇ ಪಂದ್ಯದಲ್ಲಿ 7 ವಿಕೆಟ್ಸ್ ಪಡೆದರು ಸಹ ಗುಜರಾತ್ ತಂಡ ಗಳಿಸಿದ್ದು 20 ಓವರ್ ಗಳಲ್ಲಿ 201 ರನ್ಸ್..ಇದನ್ನು ಚೇಸ್ ಮಾಡಿದ ಆರ್ಸಿಬಿ ತಂಡಕ್ಕೆ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ, ಸೋಫಿ ಡಿವೈನ್ ಮತ್ತು ಪೆರ್ರಿ ಅವರಿಗೆ ಒಳ್ಳೆಯ ಪಾರ್ಟ್ನರ್ಶಿಪ್ ಇನ್ಯಾರಿಂದಲು ಸಿಗಲಿಲ್ಲ, ಪಂದ್ಯದ ಅಂತ್ಯದ ಸಮಯಕ್ಕೆ ಹೀದರ್ ನೈಟ್ ಉತ್ತಮ ಪ್ರದರ್ಶನ ನೀಡಿದರು, ಹಾಗೆಯೇ, ಶ್ರೇಯಾಂಕ ಪಾಟೀಲ್ ಅವರು ಕೂಡ ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಿದರು, 20 ಓವರ್ ಗಳಲ್ಲಿ 190 ರನ್ಸ್ ಗಳಿಸಿ, 11 ರನ್ ಗಳ ಸೋಲು ಕಂಡಿತು. ಮೂರು ಪಂದ್ಯಗಳಲ್ಲಿ ಸೋತ ನಂತರ, ಆರ್ಸಿಬಿ ಕ್ಯಾಪ್ಟನ್ ಸ್ಮೃತಿ ಮಂಧನ ಅವರು ಹೇಳಿದ್ದು ಹೀಗೆ.. ಇದನ್ನು ಓದಿ..Kannada News: ಎನ್ಟಿಆರ್ ಹಿಂದೆ ಬಿದ್ದಿದ್ದಕ್ಕೆ ತೆಲುಗಿಗೆ ಹೋಗಿರುವ ಜಾಹ್ನವಿ ಪಡೆಯುತ್ತಿರುವ ಸಂಭಾವನೆ ಕೇಳಿದರೆ, ದೇಶಾನೇ ನಿಂತು ಹೋಗುತ್ತೆ. ಎಷ್ಟು ಕೋಟಿ ಗೊತ್ತೇ?

“ನಮ್ಮ ತಂಡದ ಬೌಲಿಂಗ್ ನಲ್ಲಿ ತೊಂದರೆ ಇದೆ ಎಂದು ನನಗೆ ಅನ್ನಿಸುತ್ತದೆ. ನಾವು 10 ರಿಂದ 15 ರನ್ಸ್ ಹೆಚ್ಚಾಗಿ ನೀಡಿದೆವು. 2 ಅಥವಾ 3 ಓವರ್ ಗಳಲ್ಲಿ ಹೆಚ್ಚು ರನ್ಸ್ ಕೊಡದೆ ಕಂಟ್ರೋಲ್ ಮಾಡಿದ್ದರೆ, ಪಂದ್ಯದ ರಿಸಲ್ಟ್ ಬೇರೆ ಥರ ಇರುತ್ತಿತ್ತು ಎಂದು ಅನ್ನಿಸುತ್ತದೆ. ಶ್ರೇಯಾಂಕ ಪಾಟೀಲ್ ಮತ್ತು ಕನಿಕ ಅಹುಜಾ ಅವರ ಪಾತ್ರ ಈ ಪಂದ್ಯದಲ್ಲಿ ಹೆಚ್ಚು ರನ್ಸ್ ಗಳಿಸಲು ಸಾಧ್ಯವಾಗುವ ಹಾಗೆ ಮಾಡಿತು..” ಎಂದು ಹೇಳಿದ್ದಾರೆ ಆರ್ಸಿಬಿ ಸ್ಮೃತಿ ನಂಧನ. ಒಟ್ಟಿನಲ್ಲಿ ಎಲ್ಲರ ನಿರೀಕ್ಷೆಯನ್ನು ಆರ್ಸಿಬಿ ಮಹಿಳಾ ತಂಡ ಸುಳ್ಳು ಮಾಡಿದ್ದು, ಆರ್ಸಿಬಿ ತಂಡವು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ತಂಡದ ಮೆಂಟರ್ ಆಗಿ ನೇಮಕ ಮಾಡಿತ್ತು, ಮೂರು ಪಂದ್ಯಗಳನ್ನು ಸೋತಿರುವುದು ಇವರಿಗೂ ನಿರಾಶೆ ಮೂಡಿಸಿದೆ. ಇದನ್ನು ಓದಿ..Kannada News: ತಮನ್ನಾ ಧರಿಸಿರುವ ಈ ಮಿಣಿ ಮಿಣಿ ಡ್ರೆಸ್ ಬೆಲೆ ಕೇಳಿದರೆ, ಒಂದು ಕ್ಷಣ ನಿಂತಲ್ಲೇ ಮೈಂಡ್ ಬ್ಲಾಕ್ ಮಾಡ್ಕೋತೀರಾ. ಎಷ್ಟು ಅಂತೇ ಗೊತ್ತೇ?
Comments are closed.