ತೆರೆ ಹಿಂದಿನ ಕಥೆ ಬಿಚ್ಚಿಟ್ಟ ಹೆಬ್ಬುಲಿ ನಟಿ: ಆ ನಟರು ಈಕೆಗೆ ನರಕ ತೋರಿಸಿದ್ದು ಹೇಗೆ ಅಂತೇ ಗೊತ್ತೇ?? ಪಾಪ ಟಾಪ್ ನಟಿಯ ಕತೆ ಅಂದು ಏನಾಯ್ತು ಗೊತ್ತೇ??
ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮಹಿಳೆಯರು, ಹೀರೋಯಿನ್ ಆಗಬೇಕು ಎಂದು ಆಸೆ ಇಟ್ಟುಕೊಂಡು ಬರುವ ಹುಡುಗಿಯರು ಕೆರಿಯರ್ ನ ಆರಂಭದಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ನಿರ್ದೇಶಕರಿಂದ ನಿರ್ಮಾಪಕರಿಂದ ಹಾಗೂ ಕಲಾವಿದರಿಂದಲು ತೊಂದರೆ ಬರುತ್ತದೆ. ಅಂಥದ್ದೆಲ್ಲವನ್ನು ಎದುರಿಸಿದಾಗ ಮಾತ್ರ ಸ್ಟಾರ್ ನಟಿಯಾಗಿ ಹೆಸರು ಮಾಡಲು ಸಾಧ್ಯವಾಗುತ್ತದೆ. ಇಂಥದ್ದೇ ಸಮಸ್ಯೆಗಳನ್ನು ಎದುರಿಸಿ ಇಂದಿಗೂ ಸ್ಟ್ರಾಂಗ್ ಆಗಿ ನಿಂತಿರುವವರು ನಟಿ ಅಮಲಾ ಪೌಲ್.
ಕನ್ನಡದಲ್ಲಿ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿರುವ ಅಮಲಾ ಪೌಲ್ ಅವರು, ಮೂಲತಃ ಕೇರಳದವರು. ಮಲಯಾಳಂ ಹಾಗೂ ತಮಿಳು ಹೆಚ್ಚಾಗಿ ನಟಿಸುತ್ತಿದ್ದ ಇವರು ಕೆಲವು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಅಮಲಾ ಅವರು ಕೆರಿಯರ್ ನಲ್ಲಿ ಪೀಕ್ ನಲ್ಲಿರುವಾಗಲೇ ಖ್ಯಾತ ತಮಿಳು ನಿರ್ದೇಶಕನ ಜೊತೆಗೆ ಮದುವೆಯಾಗಿ ನಂತರ ವಿಚ್ಛೇದನ ಪಡೆದರು. ಬಳಿಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿ, ವಿಭಿನ್ನವಾದ ಪಾತ್ರಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಇವರು ಒಂದು ಸಂದರ್ಶನದಲ್ಲಿ ಮಾತನಾಡಿ, ತಮ್ಮ ವೃತ್ತಿ ಜೀವನದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿ..Kannada News: ಇಷ್ಟು ದಿವಸ ಗಳಿಸಿದೆಲ್ಲ ಡಮಾರ್: ರಾತ್ರೋ ರಾತ್ರಿ ರಶ್ಮಿಕಾಗೆ ಬಿಗ್ ಶಾಕ್. ಒಂದೇ ಸಲ ಕೈ ಬಿಟ್ಟು ಶಾಕ್ ಕೊಟ್ಟ ನಿರ್ದೇಶಕ. ಏನಾಗಿದೆ ಗೊತ್ತೇ??

“ಕೆರಿಯರ್ ಶುರುವಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಎದುರಿಸಿದ್ದೇನೆ. ಸೀನಿಯರ್ ಕಲಾವಿದರ ಜೊತೆಗೆ ನಟಿಸುವಾಗ ಒತ್ತಡವಿತ್ತು ಆದರೆ ಅವರಿಂದ ತುಂಬಾ ಕಲಿತಿದ್ದೀನಿ. ಬದುಕಿನ ಒಂದು ಘಟ್ಟದಲ್ಲಿ ಬಹಳಷ್ಟು ಕಷ್ಟಗಳನ್ನು ಫೇಸ್ ಮಾಡಿದೆ. ಸಕ್ಸಸ್ ಗಾಗಿ ಕಷ್ಟಪಟ್ಟಿದ್ದೇನೆ ಎಂದು ಅನ್ನಿಸುತ್ತದೆ ಆದರೆ ನಾನು ವಾಸ್ತವಕ್ಕಿಂತ ದೂರದಲ್ಲಿದ್ದೇನೆ ಎನ್ನಿಸುತ್ತಿತ್ತು. ನನ್ನ ಜೀವನದಿಂದ ಕೆಲವು ಸಾರಿ ತುಂಬಾ ನೋವಾಗಿ, ನಟನೆಯನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ನಿರ್ಧಾರ ಮಾಡಿದ್ದು ಇದೆ, ಆಗ ನನ್ನ ತಂದೆ ವಿಧಿವಶರಾದರು, ನನ್ನ ಕೆರಿಯರ್ ಬಗ್ಗೆ ಬಹಳಷ್ಟು ವಿಚಾರ ಸುದ್ದಿಯಾಯಿತು. ಆಗ ನನ್ನಲ್ಲಿ ಹೆದರಿಕೆ ಇತ್ತು. ಆ ಕಷ್ಟಗಳ ಜೊತೆಗೆ ಹೋರಾಡಿ ಹೊರಬರುವುದಕ್ಕೆ ಬಹಳ ಸಮಯ ತೆಗೆದುಕೊಂಡಿತು, ಆದರೆ ಇಂದು ಅದೆಲ್ಲವನ್ನು ಮೆಟ್ಟಿ ನಿಂತಿದ್ದೇನೆ..” ಎಂದು ಹೇಳಿದ್ದಾರೆ ನಟಿ ಅಮಲಾ ಪೌಲ್. ಇದನ್ನು ಓದಿ..Kannada News: ಎಲ್ಲ ಸರಿ ಇದ್ದರೂ KGF ನಟಿ ಶ್ರೀನಿಧಿ ರವರಿಗೆ ಅವಕಾಶಗಳೇ ಸಿಗುತ್ತಿಲ್ಲ, ದಿಡೀರ್ ಎಂದು ಅವಕಾಶಗಳು ಕಡಿಮೆಯಾಗಿದ್ದು ಯಾಕೆ. ಏನಾಗಿದೆ??
Comments are closed.