Bhagyalakshmi: ಕೊನೆಗೂ ಸಿಕ್ತು ಕಾರಣ: ನಟಿ ಗೌತಮಿ ಭಾಗ್ಯಲಕ್ಷ್ಮಿ ಧಾರವಾಹಿ ಬಿಟ್ಟು ಹೋಗಲು ಕಾರಣವೇನು ಗೊತ್ತೇ?? ತಾನೇ ಎಲ್ಲವನ್ನು ಹೇಳಿದ ನಟಿ.
Bhagyalakshmi: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಶ್ರೇಷ್ಠ ಪಾತ್ರ ನಿರ್ವಹಿಸಿದ್ದ ನಟಿ ಗೌತಮಿ (Goutami Gowda) ಅವರು ಈಗ ಧಾರವಾಹಿಯಿಂದ ಹೊರಬಂದಿದ್ದಾರೆ. ಶ್ರೇಷ್ಠ ಪಾತ್ರ ವಿಲ್ಲನ್ ಪಾತ್ರ ಆಗಿದ್ದರು ಸಹ, ಜನರಿಗೆ ಈ ಪಾತ್ರ ಇಷ್ಟವಾಗಿತ್ತು. ಭಾಗ್ಯಳ ಗಂಡನಿಗೆ ಮದುವೆಯಾಗಿ ಎರಡು ಮಕ್ಕಳಿದೆ ಎಂದು ಗೊತ್ತಿದ್ದರೂ ಕೂಡಕ್ಜ್ ಅವನನ್ನೇ ಮದುವೆಯಾಗಬೇಕು ಎಂದು ಬಯಸುವ ಪಾತ್ರ ಶ್ರೇಷ್ಠ ಪಾತ್ರ ಆಗಿತ್ತು.

ಇದ್ದಕ್ಕಿದ್ದ ಹಾಗೆ ಗೌತಮಿ ಅವರು ಈ ಪಾತ್ರದಿಂದ ಹೊರಬಂದಿದ್ದಕ್ಕೆ ಕಾರಣ ಏನಿರಬಹುದು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಅದಕ್ಕೆ ಉತ್ತರವನ್ನು ಸ್ವತಃ ಗೌತಮಿ ಅವರೇ ತಿಳಿಸಿದ್ದಾರೆ. ಗೌತಮಿ ಅವರು 10 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಚಿ.ಸೌ.ಸಾವಿತ್ರಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ (Bigg Boss) ಶೋ ನಲ್ಲಿ ಸ್ಫರ್ಧಿಯಾಗಿ ಬಂದಿದ್ದರು. ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಇದನ್ನು ಓದಿ..ಮಾಡಿದ ಸಾಲ ತೀರಿಸಲು, ಶ್ರೀ ದೇವಿ ಮಗಳು ಮಾಡುತ್ತಿರುವ ಕೆಲಸ ಏನು ಗೊತ್ತೇ? ಟಾಪ್ ನಟಿಯ ಮಗಳ ಬಾಳಲ್ಲಿ ಏನಾಗಿದೆ ಗೊತ್ತೇ??
ಈಗ ಭಾಗ್ಯಲಕ್ಷ್ಮಿ ಧಾರವಾಹಿ ಇಂದ ಹೊರಬಂದ ನಂತರ, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಗೌತಮಿ ಅವರು, “ನಮಸ್ತೆ .. ವೈಯಕ್ತಿಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಇಂದ ಹೊರ ಬರಬೇಕಾಯಿತು…ಇಷ್ಟು ದಿನ ‘ ನೆಗಟಿವ್ ಪಾತ್ರದಲ್ಲೂ ನನ್ನ ಒಪ್ಪಿ ಹರಸಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು..ತುಂಬಾ ಕಷ್ಟದ ನಿರ್ಧಾರ ಆದರೆ ಅನಿವಾರ್ಯ ಪರಿಸ್ಥಿತಿ, ಆದಷ್ಟು ಬೇಗ ನಿಮಗೆ ಹೇಳುತ್ತೇನೆ…ನಗುನಗುತಾ ಹೊರ ಬಂದಿದ್ದೇನೆ. ಬೇರೆ ಯಾವುದೇ ಕಾರಣ ಇಲ್ಲ.. ಇನ್ನು ಮುಂದೆಯೂ ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ…” ಎಂದು ಬರೆದುಕೊಂಡಿದ್ದಾರೆ.
ಕೊನೆಗೂ ಅಭಿಮಾನಿಗಳಿಗೆ ಗೌತಮಿ ಅವರು ಧಾರವಾಹಿಯಿಂದ ಹೊರಬರಲು ಕಾರಣ ಏನು ಎಂದು ಗೊತ್ತಾಗಿದ್ದು, ಆದಷ್ಟು ಬೇಗ ಕಿರುತೆರೆಗೆ ವ್ಯಾಪಸ್ ಬನ್ನಿ ಕಮೆಂಟ್ಸ್ ಮೂಲಕ ವಿಶ್ ಮಾಡಿದ್ದಾರೆ. ಗೌತಮಿ ಅವರು ಧಾರವಾಹಿಯಿಂದ ಹೊರಬಂದ ನಂತರ ಶ್ರೇಷ್ಠ ಪಾತ್ರದಲ್ಲಿ ನಟಿಸುವುದು ಯಾರು ಎನ್ನುವ ಕುತೂಹಲ ಇತ್ತು, ಅದಕ್ಕೀಗ ಉತ್ತರ ಸಿಕ್ಕಿದ್ದು, ಶ್ರೇಷ್ಠ ಪಾತ್ರಕ್ಕೆ ನಟಿ ಕಾವ್ಯ ಗೌಡ (Kavya Gowda) ಅವರು ಬಂದಿದ್ದಾರೆ. ಈಗಾಗಲೇ ಕಾವ್ಯ ಗೌಡ ಅವರ ದೃಶ್ಯಗಳು ಪ್ರಸಾರವಾಗುತ್ತಿದೆ. ಇದನ್ನು ಓದಿ..Film News: ಭಾಗ್ಯಲಕ್ಷ್ಮಿ ಧಾರಾವಾಹಿಗೆ ಮೊದಲ ಎಂಟ್ರಿ ಯಲ್ಲಿಯೇ ಮನಗೆದ್ದಿರುವ ಕಾವ್ಯ ಗೌಡ ನಿಜಕ್ಕೂ ಯಾರು ಗೊತ್ತೇ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??
Comments are closed.