Telugu: ತೆಲುಗು ಚಿತ್ರರಂಗವನ್ನೇ ಶೇಕ್ ಮಾಡಿ, ಚಿರು, ವೆಂಕಟೇಶ್ ರವರನ್ನು ನಡುಗುವಂತೆ ಮಾಡಿದ ಯುವ ನಟ ಯಾರು ಗೊತ್ತೇ? ಏನಾಗಿದೆ ಗೊತ್ತೇ??
Telugu: ತೆಲುಗು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದು, ಸ್ಟಾರ್ ಹೀರೋಗಳಾಗಿ ಇಂದಿಗೂ ಬೇಡಿಕೆಯಲ್ಲಿ ಇರುವವರು ನಟ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರು ಹಾಗೂ ನಟ ವಿಕ್ಟರಿ ವೆಂಕಟೇಶ್ (Venkatesh) ಅವರು. ಇವರಿಬ್ಬರಿಗೆ ಎಷ್ಟೇ ವಯಸ್ಸು ಆಗುತ್ತಿದ್ದರು ಸಹ, ಇವರಿಗೆ ಇರುವ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಚಿರಂಜೀವಿ ಅವರ ಸಿನಿಮಾ ಆಗಲಿ, ವೆಂಕಟೇಶ್ ಅವರ ಸಿನಿಮಾ ಆಗಲಿ ಬಿಡುಗಡೆ ಆಗುತ್ತಿದೆ ಎಂದರೆ, ಅಭಿಮಾನಿಗಳು ಥಿಯೇಟರ್ ಗೆ ಹೋಗಲು ಕಾಯುತ್ತಿರುತ್ತಾರೆ..

80 ಹಾಗೂ 90ರ ದಶಕದಲ್ಲಿ ಎಲ್ಲರ ಮೆಚ್ಚಿನ ಹೀರೋಗಳಾಗಿದ್ದ, ನಂತರ ಬಂದ ಯುವ ನಟರಿಗೂ ಕಾಂಪಿಟೇಶನ್ ಕೊಟ್ಟು, ಸ್ಟಾರ್ ಸ್ಟೇಟಸ್ ಉಳಿಸಿಕೊಂಡರು. ಆದರೆ ಆ ಒಬ್ಬ ಯಂಗ್ ಹೀರೋ ಮಾತ್ರ, ಇವರಿಬ್ಬರನ್ನು ಮೀರಿಸಿ ಗೆಲ್ಲುವು ಪಡೆದಿದ್ದರು, ಆ ಯಂಗ್ ಹೀರೋ ಯಾರು ಗೊತ್ತಾ? 2000 ಇಸವಿಯಲ್ಲಿ ಚಿತ್ರಂ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ನಟ ಉದಯ್ ಕಿರಣ್ (Uday Kiran), ಹ್ಯಾಂಡ್ಸಮ್ ಹೀರೋ ಆಗಿ, ಹೆಚ್ಚು ಲವ್ ಸ್ಟೋರಿ ಸಿನಿಮಾಗಳಲ್ಲಿ ನಟಿಸಿ, ಲವ್ವರ್ ಬಾಯ್ ಇಮೇಜ್ ಹೊಂದಿದ್ದರು. ಇದನ್ನು ಓದಿ..Pooja Hegde: ಬುರ್ಖಾ ಧರಿಸಿ ಮಾಡುವ ಇಫ್ತಾರ್ ಕೂಟಕ್ಕೆ ಬ್ಯಾಕ್ ಲೆಸ್ ಬ್ಲೌಸ್ ಹಾಕಿಕೊಂಡು ಹೋದ ಪೂಜಾ ಹೆಗ್ಡೆ. ನಂತರ ಏನಾಯ್ತು ಗೊತ್ತೇ?
ಉದಯ್ ಕಿರಣ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ, ಸೂಪರ್ ಹಿಟ್ ಆಗೋದು ಗ್ಯಾರಂಟಿ ಎನ್ನುವ ಮಾತು ಕೂಡ ಇತ್ತು. 2002ರಲ್ಲಿ ಉದಯ್ ಕಿರಣ್ ಅವರ ಮನಸ್ಸಂತ ನುವ್ವೆ ಸಿನಿಮಾವನ್ನು 2002ರ ಸೆಪ್ಟೆಂಬರ್ 2ನೇ ವಾರ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದರು ನಿರ್ಮಾಪಕ ಎಂ.ಎಸ್.ರಾಜು, ಆದರೆ ಸೆಪ್ಟೆಂಬರ್ ಮೊದಲ ವಾರ ವೆಂಕಟೇಶ್ ಅವರ ನುವ್ವು ನಾಕು ನಚ್ಚವ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದರಿಂದ, ಉದಯ್ ಕಿರಣ್ ಸಿನಿಮಾ ಬಿಡುಗಡೆ ಆದರೆ ವೆಂಕಟೇಶ್ ಅವರ ಸಿನಿಮಾ ಕಲೆಕ್ಷನ್ ಕಡಿಮೆ ಆಗುತ್ತದೆ ಎಂದು, ಮನಸ್ಸಂತ ನುವ್ವೆ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಬೇಕು ಎಂದು ಹೇಳಿದ್ದಕ್ಕೆ, ನಿರ್ಮಾಪಕರು ಒಪ್ಪಿಕೊಂಡರು..
ಬಳಿಕ ಆಕ್ಟೊಬರ್ ನಲ್ಲಿ ಬಿಡುಗಡೆ ಮಾಡಬೇಕು ಎಂದುಕೊಂಡಾಗ, ಆ ಸಮಯಕ್ಕೆ ಚಿರಂಜೀವಿ ಅವರ ಡ್ಯಾಡಿ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಮತ್ತೆರಡು ವಾರ ಉದಯ್ ಕಿರಣ್ ಸಿನಿಮಾ ಪೋಸ್ಟ್ ಪೋನ್ ಮಾಡಬೇಕು ಎಂದು ಕೇಳಿಕೊಂಡರು, ಕೊನೆಗೆ ಆಕ್ಟೊಬರ್ 2ನೇ ವಾರ ಬಿಡುಗಡೆಯಾದ ಮನಸ್ಸಂತ ನುವ್ವೆ ಸಿನಿಮಾ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಆಗಿ, ಚಿರಂಜೀವಿ ಹಾಗೂ ವೆಂಕಟೇಶ್ ಅವರ ಸಿನಿಮಾವನ್ನೇ ಮೀರಿಸಿತ್ತು. ಆಗ ಆ ಇಬ್ಬರು ಸ್ಟಾರ್ ಹೀರೋಗಳನ್ನು ಮೀರಿಸಿದ ಉದಯ್ ಕಿರಣ್ ಎಂದು ಕೂಡ ಸುದ್ದಿಯಾಗಿತ್ತು. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.
Comments are closed.