Naga Chaitanya: ಮತ್ತೊಂದು ಚಾನ್ಸ್ ಹೊಡೆದ ನಾಗ ಚೈತನ್ಯ: ದೇವಲೋಕದ ಕನ್ಯೆಯಂತೆ ಇರುವ ನಟಿ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??
Naga Chaitanya: ನಟ ನಾಗಚೈತ್ಯನ್ಯ (Nagachaitanya) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿನ ಎರಡು ಸಿನಿಮಾಗಳು ಸಹ ಫ್ಲಾಪ್ ಆಗಿದೆ. ಆದರೆ ನಾಗಚೈತನ್ಯ ಅವರಿಗೆ ಇರುವ್ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ನಾಗಚೈತನ್ಯ ಅವರು ಇದೀಗ ತಮಿಳು ನಿರ್ದೇಶಕ ವೆಂಕಟ್ ಪ್ರಭು (Venkat Prabhu) ಅವರ ಜೊತೆಗೆ ಕಸ್ಟಡಿ (Custody) ಸಿನಿಮಾ ಮಾಡಿದ್ದಾರೆ. ಈ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಯಿತು..

ಕಸ್ಟಡಿ ಸಿನಿಮಾ ಇನ್ನೇನು ತೆರೆಕಾಣಲಿದ್ದು, ಇತ್ತೀಚೆಗೆ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಆಗಲಿರುವುದರಿಂದ ಕಸ್ಟಡಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಹೈದರಾಬಾದ್ (Hyderabad) ನಲ್ಲಿ ಅದ್ಧೂರಿಯಾಗಿ ನಡೆಸಲಾಗಿದೆ. ಈ ಕಾರ್ಯಕ್ರಮಕ್ಕೆ ಚಿತ್ರತಂಡದ ಎಲ್ಲರೂ ಬಂದಿದ್ದರು. ಕಸ್ಟಡಿ ಸಿನಿಮಾದ ಹೀರೋಯಿನ್ ನಟಿ ಕೃತಿ ಶೆಟ್ಟಿ ಎನ್ನುವುದು ಗೊತ್ತಿರುವ ವಿಚಾರ..
ನಾಗಚೈತ್ಯನ್ಯ ಮತ್ತು ಕೃತಿ ಶೆಟ್ಟಿ (Krithi Shetty) ಈ ಮೊದಲೇ ಬಂಗಾರ್ರಾಜು (Bangarraju) ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆ ಸಿನಿಮಾ ಒಳ್ಳೆಯ ಹೆಸರು ಪಡೆದುಕೊಂಡಿತ್ತು. ಇದೀಗ ಕಸ್ಟಡಿ ಸಿನಿಮಾ ಮೇಲೆ ಎಲ್ಲರ ನಿರೀಕ್ಷೆ ಇದೆ. ನಾಗಚೈತನ್ಯ ಮತ್ತು ಕೃತಿ ಶೆಟ್ಟಿ ಬಹಳ ಕ್ಲೋಸ್ ಎನ್ನುವ ವಿಷಯ ಗೊತ್ತಿರುವುದೇ ಆಗಿದೆ. ಇವರಿಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಿನದು ಏನೋ ಇದೆ ಎಂದು ಗಾಸಿಪ್ ಕೂಡ ಇದೆ. ಇದೆಲ್ಲದರ ನಡುವೆ ಕೃತಿ ಶೆಟ್ಟಿ ಅವರು ಪ್ರೀರಿಲೀಸ್ ಇವೆಂಟ್ ನಲ್ಲಿ ನಾಗಚೈತನ್ಯ ಅವರ ಬಗ್ಗೆ ಹೇಳಿರುವ ಮಾತುಗಳು ಈಗ ವೈರಲ್ ಆಗುತ್ತಿದೆ.
“ಇಂದು ನಾನು ಈ ಸ್ಥಾನದಲ್ಲಿ ಇರುವುದಕ್ಕೆ ಕಾರಣ ನಿಮ್ಮ ಪ್ರೀತಿ ಮತ್ತು ಅಭಿಮಾನ. ನಾಗಚೈತನ್ಯ ಅವರ ಬಗ್ಗೆ ಹೇಳುವುದಾದರೆ, ಅವರು ಯಾವತ್ತಿಗೂ ನನ್ನ ಬಂಗಾರ್ರಾಜು..ಈ ಸಿನಿಮಾದಲ್ಲಿ ಅವರು ಶಿವ ಪಾತ್ರದಲ್ಲಿ ನಟಿಸಿದ್ದಾರೆ. ಶಿವ ಪಾತ್ರದಲ್ಲಿ ಅವರ ನಟನೆ ನೋಡಿದರೆ, ಪ್ರತಿಯೊಬ್ಬರಿಗೂ ಅವರ ಮೇಲೆ ಲವ್ ಆಗುತ್ತದೆ. ನನಗೆ ಇನ್ಸ್ಪಿರೇಷನ್ ಆಗಿರುವ ಹೀರೋಗಳಲ್ಲಿ ನಾಗಚೈತನ್ಯ ಕೂಡ ಒಬ್ಬರು..” ಎಂದಿದ್ದಾರೆ ಕೃತಿ. ನಾಗಚೈತನ್ಯ ಅವರನ್ನು ಕಂಡರೆ ಇಷ್ಟ ಎಂದು ಪರೋಕ್ಷವಾಗಿ ಕೃತಿ ಶೆಟ್ಟಿ ಹೇಳುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು.
Comments are closed.