Kannada News: ಇನ್ನು 18 ವರ್ಷಾನೇ ಆಗಿಲ್ಲ, ಆದರೂ ಇಬ್ಬರು ಬಸ್ ಸ್ಟಾಪ್ ನಲ್ಲಿ ಏನು ಮಾಡಿದ್ದಾರೆ ಗೊತ್ತೇ? ಎತ್ತ ಸಾಗುತ್ತಿದೆ ಯುವ ಜನತೆ? ಇವರಿಗೆ ಅದೊಂದೇ ಸಾಕೆ?

Kannada News: ಮೊದಲೆಲ್ಲಾ ವಿದ್ಯಾರ್ಥಿಗಳಿಗೆ ಬಹಳಷ್ಟು ಜವಾಬ್ದಾರಿಗಳಿರುತ್ತಿತ್ತು, ತಂದೆ ತಾಯಿ ಕಷ್ಟಪಟ್ಟು ಓದಿಸುತ್ತಿದ್ದಾರೆ. ಅವರ ಹೆಸರು ಬೆಳಗಿಸುವ ಹಾಗೆ ಚೆನ್ನಾಗಿ ಒಳ್ಳೆಯ ಸ್ಥಾನಕ್ಕೆ ಬರಬೇಕು ಎನ್ನುವ ಧ್ಯೇಯ ವಿದ್ಯಾರ್ಥಿಗಳಲ್ಲಿ ಇತ್ತು. ಪಾಠ ಹೇಳಿಕೊಡುವ ಗುರುಗಳಿಗೆ ಒಳ್ಳೆಯ ಹೆಸರು ತರಬೇಕು, ಒಂದು ಒಳ್ಳೆಯ ಹಂತಕ್ಕೆ ಹೋಗಿ ಸಮಾಜದಲ್ಲಿ ಗೌರವ ಪಡೆದುಕೊಳ್ಳಬೇಕು ಎಂದು ಮನಸ್ಸಿನಲ್ಲಿ ಇಟ್ಟುಕೊಂಡು ಚೆನ್ನಾಗಿ ಓದುತ್ತಿದ್ದರು.

ಆದರೆ ಈಗ ಕಾಲ ಬದಲಾಗಿ ಹೋಗಿದೆ, ಓದುವುದೊಂದನ್ನು ಬಿಟ್ಟು ಬೇರೆ ಎಲ್ಲದರಲ್ಲೂ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಈಗಿನ ವಿದ್ಯಾರ್ಥಿಗಳು. ಸೋಷಿಯಲ್ ಮೀಡಿಯಾ, ರೀಲ್ಸ್, ಲವ್ ಇವುಗಳ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಅಪ್ಪ ಅಮ್ಮ ಎಷ್ಟು ಕಷ್ಟಪಟ್ಟು ಓದಿಸುತ್ತಿದ್ದಾರೆ ಎನ್ನುವುದನ್ನು ಸ್ವಲ್ಪವೂ ಅರ್ಥಮಾಡಿಕೊಳ್ಳದೆ, ಹೆತ್ತವರಿಗೆ ಬೆಲೆ ಕೊಡದೆ, ಅವರ ಮರಿಯಾದೆ ಕಳೆಯುವಂಥ ಕೆಲಸಗಳನ್ನೇ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವ ಹಾಗೆ ಮಕ್ಕಳು ಮಾಡುವ ಇಂಥ ಕೆಲಸಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತವೆ. ಇತ್ತೀಚಿಗೆ ಮದುವೆ ಎನ್ನುವುದು ಕೂಡ ಇವರಿಗೆಲ್ಲಾ ಫ್ಯಾಶನ್ ಎನ್ನುವ ಹಾಗೆ ಆಗಿ ಹೋಗಿದೆ. ಇದನ್ನು ಓದಿ..Kannada Story: ಬಾಡಿಗೆ ಕೊಟ್ಟಿಲ್ಲ ಎಂದು, ಕನಿಕರ ಮರೆತು ವಯಸ್ಸಾದ ಅಜ್ಜನನ್ನು ಹೊರಹಾಕಿದ ಮಾಲೀಕ. ಆದರೆ ಆಮೇಲೆ ನಡೆದಿದ್ದು ನೋಡಿ, ಬೆವತು ಹೋಗಿದ್ದು ಯಾಕೆ ಗೊತ್ತೇ??

ಅಪ್ರಾಪ್ತ ವಿದ್ಯಾರ್ಥಿಗಳು ದೇವಸ್ಥಾನದ ಎದುರು, ಶಾಲೆಯಲ್ಲಿ ತಾಳಿ ಕಟ್ಟಿ ಮದುವೆ ಆಗುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಅಂಥದ್ದೇ ಮತ್ತೊಂದು ಘಟನೆ ಈಗ ನಡೆದಿದೆ, ತಮಿಳುನಾಡಿನ ಚಿದಂಬರಂನ ಗಾಂಧಿ ಸ್ಟ್ಯಾಚ್ಯು ಎದುರು ಇರುವ ಬಸ್ ಸ್ಟ್ಯಾಂಡ್ ನಲ್ಲಿ ಅಪ್ರಾಪ್ತ ಹುಡುಗನೊಬ್ಬ ಅಪ್ರಾಪ್ತ ಹುಡುಗಿಗೆ ತಾಳಿ ಕಟ್ಟಿದ್ದು ಅವರ ಫ್ರೆಂಡ್ ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹುಡುಗಿ ಇಂಟರ್ ಹಾಗೂ ಹುಡುಗ ಪಾಲಿಟೆಕ್ನಿಕ್ ಓದುತ್ತಿದ್ದಾನೆ ಎಂದು ತಿಳಿದುಬಂದಿದೆ. ಇದೀಗ ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಓದಿ..Kannada News: ಗರ್ಲ್ ಫ್ರೆಂಡ್ ಇಲ್ಲದೆ ಕಷ್ಟವಾಗುತ್ತಿದೆಯೇ?? ಚಿಂತೆ ಮಾಡಬೇಡಿ, ಗರ್ಲ್ ಫ್ರೆಂಡ್ ಅನ್ನು ಬಾಡಿಗೆ ಪಡೆಯಬಹುದು. ಏನೆಲ್ಲಾ ಮಾಡಬಹುದು ಗೊತ್ತೇ??