Adah Sharma: ಕೇರಳ ಸ್ಟೋರಿ ನಟಿ ಆಧಾ ಶರ್ಮ ರವರಿಗೆ ರಸ್ತೆ ಅಪಘಾತ- ನಿಜಕ್ಕೂ ಅಲ್ಲಿ ನಡೆದದ್ದು ಏನು ಗೊತ್ತೇ?

Adah Sharma: ಈಗ ನಮ್ಮ ದೇಶದಲ್ಲಿ ಸದ್ದು ಮಾಡುತ್ತಿರುವುದು ದಿ ಕೇರಳ ಸ್ಟೋರಿ ಸಿನಿಮಾ (The Kerala Story). ಈ ಸಿನಿಮಾ ಬಹಳಷ್ಟು ವಿವಾದಗಳಿಂದಲೇ ಸದ್ದು ಮಾಡಿತ್ತು. ಕಳೆದ ವಾರ ಬಿಡುಗಡೆಯಾಗಿರುವ ಕೇರಳ ಸ್ಟೋರಿ ಸಿನಿಮಾ ಇದೀಗ 100 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿ, ಸಕ್ಸಸ್ ಸಾಲಿನಲ್ಲೇ ಇದೆ. ಆದರೆ ಸಿನಿಮಾ ಬಗ್ಗೆ ವಿವಾದಗಳು ಕೂಡ ಕಡಿಮೆ ಆಗಿಲ್ಲ. ಈಗಾಗಲೇ ತಮಿಳುನಾಡು (Tamilnadu) ಮತ್ತು ಪಶ್ಚಿಮ ಬಂಗಾಳ (West Bengal) ರಾಜ್ಯ ಚಿತ್ರವನ್ನು ನಿಷೇಧ ಮಾಡಿದೆ..

ನಿಷೇಧ ಮಾಡುವುದಕ್ಕೆ ಕಾರಣ, ಭದ್ರತೆ ಆಗಿದೆ. ಹಾಗೆಯೇ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳು ಈ ಸಿನಿಮಾವನ್ನು ಜನರು ನೋಡಬೇಕು ಎಂದು ದಿ ಕೇರಳ ಸ್ಟೋರಿ ಸಿನಿಮಾಗೆ ಟ್ಯಾಕ್ಸ್ ಫ್ರೀ ಘೋಷಣೆ ಮಾಡಿದೆ. ಇದೆಲ್ಲಾ ಒಂದು ಕಡೆಯಾದರೆ ಈ ಸಿನಿಮಾ ಎಲ್ಲಾ ಕಡೆ ಜೋರಾಗಿಯೇ ಸದ್ದು ಮಾಡುತ್ತಿದೆ. ದಿ ಕೇರಳ ಸ್ಟೋರಿ ಸಿನಿಮಾವನ್ನು ಬಿಜೆಪಿ (BJP) ಪಕ್ಷದವರು ಬೆಂಬಲಿಸುತ್ತಿದ್ದರೆ, ವಿರೋಧ ಪಕ್ಷದವರು ಸಿನಿಮಾವನ್ನು ವಿರೋಧಿಸುತ್ತಿದ್ದಾರೆ. ಇದನ್ನು ಓದಿ..Sanjana Galrani: ಮುಸ್ಲಿಂ ನನ್ನ ಮದುವೆಯಾದರು ಬುರ್ಖಾ ಹಾಕದೆ, ಇದೀಗ ದಿಡೀರ್ ಎಂದು ಸಂಜನಾ ಬುರ್ಖಾದಲ್ಲಿ ಕಾಣಿಸಿಕೊಂಡದ್ದು ಯಾಕೆ ಗೊತ್ತೇ?? ಕಾರಣ ಏನು ಗೊತ್ತೇ?

ಸಿನಿಮಾ ಏನೋ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿರುವಾಗ, ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಅದಾ ಶರ್ಮಾ (Adah Sharma) ಹಾಗೂ ನಿರ್ದೇಶಕ ಸುದೀಪ್ತೋ ಸೇನ್ (Sudeepto Sen) ಇಬ್ಬರು ಹೋಗುತ್ತಿದ್ದ ಕಾರ್ ಗೆ ಅಪಘಾತವಾಗಿದೆ. ಮುಂಬೈನಲ್ಲಿ ಕಾರ್ಯಕ್ರಮ ಒಂದಕ್ಕೆ ಹೋಗುವಾಗ ಈ ಅಪಘಾತ ಆಗಿದ್ದು, ಇಬ್ಬರಿಗೂ ಗಾಯಗಳಾಗಿದೆ. ತಕ್ಷಣವೇ ಅದಾ ಶರ್ಮ ಹಾಗೂ ಸುದೀಪ್ತೋ ಸೇನ್ ಅವರನ್ನು ಆಸ್ಪತ್ರೆಗೆ ಕಳಿಸಲಾಗಿದೆ.

ಈ ವಿಚಾರ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ. ನಿನ್ನೆ ಸಂಜೆ ಕರೀಂನಗರದಲ್ಲಿ ಹಿಂದೂ ಏಕತಾ ಯಾತ್ರೆಯಲ್ಲಿ ದಿ ಕೇರಳ ಸ್ಟೋರಿ ತಂಡ ಭಾಗವಹಿಸಬೇಕಿತ್ತು. ಆದರೆ ಅಪಘಾತ ಆಗಿರುವುದರಿಂದ ಬರಲು ಆಗುತ್ತಿಲ್ಲ ಎಂದು ಸುದೀಪ್ತೋ ಸೇನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಯುವ ಕೂಟವನ್ನು ನಡೆಸಲು ಸಾಧ್ಯ ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇವರ ಆರೋಗ್ಯ ಹೇಗಿದೆ ಎಂದು ಇನ್ನುಮುಂದೆಯಷ್ಟೇ ಗೊತ್ತಾಗಬೇಕಿದೆ. ಇದನ್ನು ಓದಿ..Business Idea: ಅಲ್ಲಲ್ಲಿ ಇರುವ ಖಾಲಿ ಜಾಗದಲ್ಲಿ ಈ ಚಿಕ್ಕ ಕೆಲಸ ಮಾಡಿ, ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಆದಾಯ. ಹೇಗೆ ಗೊತ್ತೇ??

adah sharmaBest News in Kannadafilm newsFilm News in kannadafilm news kannadakannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsNews in Kannadathe keralathe kerala storytop news kannadatv news kannada