Sushant Singh Rajput: ಬಿಜೆಪಿ ಬಂದಿದ್ದೆ ತಡ – ಸುಶಾಂತ್ ಸಿಂಗ್ ಸಾವಿನ ತನಿಖೆಯಲ್ಲಿ ಟ್ವಿಸ್ಟ್ ಕೊಟ್ಟ ಬಿಜೆಪಿ ಉಪಮುಖ್ಯಮಂತ್ರಿ. ಈಗಲಾದರೂ ಸಿಗುತ್ತಾ ನ್ಯಾಯ? ಏನಾಗಿದೆ ಗೊತ್ತೇ?

Sushant Singh Rajput: ಬಿಜೆಪಿ ಬಂದಿದ್ದೆ ತಡ – ಸುಶಾಂತ್ ಸಿಂಗ್ ಸಾವಿನ ತನಿಖೆಯಲ್ಲಿ ಟ್ವಿಸ್ಟ್ ಕೊಟ್ಟ ಬಿಜೆಪಿ ಉಪಮುಖ್ಯಮಂತ್ರಿ. ಈಗಲಾದರೂ ಸಿಗುತ್ತಾ ನ್ಯಾಯ? ಏನಾಗಿದೆ ಗೊತ್ತೇ?

Sushant Singh Rajput: ಬಾಲಿವುಡ್ (Bollywood) ನಲ್ಲಿ ಹೆಸರು ಮಾಡಬೇಕಿದ್ದ ಅಪರೂಪದ ಪ್ರತಿಭೆ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput). ಈ ನಟ ಎಂಎಸ್ ಧೋನಿ (MS Dhoni) ದಿ ಅನ್ ಟೋಲ್ಡ್ ಸ್ಟೋರಿ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ, ಹೆಸರು, ಅಭಿಮಾನಿ ಬಳಗ ಎಲ್ಲವನ್ನು ಪಡೆದರು. ಅದಾದ ಬಳಿಕ ತೆರೆಕಂಡ ಸಿನಿಮಾಗಳು ಕೂಡ ಉತ್ತಮ ಯಶಸ್ಸು ಗಳಿಸಿದವು. ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ದೊಡ್ಡ ಸ್ಟಾರ್ ಆಗಿ ಹೆಸರು ಮಾಡುತ್ತಾರೆ ಎನ್ನುವಾಗಲೇ ಅವರು ಇನ್ನಿಲ್ಲ ಎನ್ನುವ ಸುದ್ದಿ ಅಪ್ಪಳಿಸಿತ್ತು..

devendra fudnavis about sushath singh rajput Sushant Singh Rajput:

2020ರ ಜೂನ್ 14ರಂದು ತಮ್ಮ ಅಪಾರ್ಟ್ಮೆಂಟ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ಇನ್ನಿಲ್ಲದ ಸ್ಥಿತಿಯಲ್ಲಿ ಪತ್ತೆಯಾದರು. ಮೊದಲಿಗೆ ಅವರು ಉಸಿರು ನಿಲ್ಲಿಸಿಕೊಂಡಿದ್ದಾರೆ ಎಂದು ಅನ್ನಿಸಿದರೂ ಸಹ, ಸೋಷಿಯಲ್ ಮೀಡಿಯಾದಲ್ಲಿ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಅದು ಅವರೇ ಮಾಡಿಕೊಂಡಿರುವುದಲ್ಲ, ಉದ್ದೇಶಪೂರ್ವಕವಾಗಿ ಯಾರೋ ಮಾಡಿದ್ದಾರೆ ಎಂದು ಅಭಿಯಾನ ಶುರು ಮಾಡಿದರು. ಇದನ್ನು ಓದಿ..Suhana Khan: ಚಿತ್ರರಂಗ ಪ್ರವೇಶ ಮಾಡುತ್ತಿರುವ ಶಾರುಖ್ ಪುತ್ರಿಯ ವಯಸ್ಸು ಎಷ್ಟು ಗೊತ್ತೇ? ಇಷ್ಟೊಂದು ವಯಸ್ಸು ಆಗಿದ್ಯಾ??

ಬಹಳಷ್ಟು ಟ್ವೀಟ್ ಗಳು, ಅಭಿಯಾನಗಳು ಎಲ್ಲವೂ ನಡೆದು, ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಸಾವಿನ ಹಿಂದಿನ ಕಾರಣ ಬಯಲಾಗಲೇಬೇಕು ಎಂದು ಅಭಿಮಾನಿಗಳು ಪಟ್ಟು ಬಿಡದ ಕಾರಣ, ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಕೇಸ್ ಅನ್ನು ಸಿಬಿಐ ಗೆ ವರ್ಗಾಯಿಸಲಾಗಿತ್ತು, ಆದರೆ 3 ವರ್ಷಗಳು ಕಳೆದಿದ್ದರು ಸಹ, ಈ ಕೇಸ್ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಸಿಕ್ಕಿಲ್ಲ, ಪ್ರಗತಿಯು ಇರಲಿಲ್ಲ..

ಈ ಕೇಸ್ ಬಗ್ಗೆ ಹಲವು ಪ್ರಶ್ನೆಗಳು ಅನುಮಾನಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ, ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ನಡೆದ ಈ ದುಷ್ಕೃತ್ಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನಗೊಳ್ಳುತ್ತಿದ್ದಾರೆ. 3 ವರ್ಷವಾದರೂ ಕೇಸ್ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ ಎಂದುಕೊಳ್ಳುವಾಗಲೇ, ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನಾವಿಸ್ ಅವರು ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಕೇಸ್ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಇದನ್ನು ಓದಿ..Malavika: ಗಣೇಶ್ ಸಿನೆಮಾಗೆ ಬೆಣ್ಣೆಯಂತಹ ಮಲಯಾಳಿ ನಾಯಕಿ- ನೋಡಲು ಎರಡು ಕಣ್ಣು ಸಾಲದು. ಎಲ್ಲಿಂದ ಬರ್ತಾರೋ ಇವೆಲ್ಲ.

“ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಕೇಸ್ ಬಗ್ಗೆ ತಮ್ಮ ಹತ್ತಿರ ಸಾಕ್ಷಿ ಇದೆ ಎಂದು ಕೆಲವು ಜನರು ಹೇಳಿದ್ದರು, ಅವರ ವಿಚಾರಣೆ ನಡೆಯುತ್ತಿದೆ. ಅವರನ್ನು ಕಾಂಟ್ಯಾಕ್ಟ್ ಮಾಡಿ, ಪೊಲೀಸರಿಗೆ ಎಲ್ಲಾ ಸಾಕ್ಷಿಗಳನ್ನು ಕೊಡುವಂತೆ ಮನವಿ ಮಾಡಿದ್ದೇವೆ..ಈಗ ಅವರು ನೀಡಿರುವ ಸಾಕ್ಷಿಗಳ ಪರಿಶೀಲನೆ ನಡೆಯುತ್ತಿದೆ. ಇನ್ನು ಇದು ತನಿಖೆಯ ಹಂತದಲ್ಲಿ ಇರುವಾಗ, ಕೇಸ್ ನ ಅಂತಿಮ ವಿಷಯದ ಬಗ್ಗೆ ಮಾತನಾಡುವುದು ಸರಿಯಲ್ಲ..” ಎಂದು ಹೇಳಿದ್ದಾರೆ. ಕೊನೆಗೂ ಒಂದು ಪಾಸಿಟಿವ್ ಅಪ್ಡೇಟ್ ಸಿಕ್ಕಿರುವುದಕ್ಕೆ ಅಭಿಮಾನಿಗಳಿಗೆ ಸಂತೋಷವಾಗಿದೆ. ಇದನ್ನು ಓದಿ..Financial tips: ನೀವು ಕೋಟಿಗಟ್ಟಲೆ ಹಣ ಸಂಪಾದನೆ ಮಾಡಬೇಕು ಎಂದರೆ, ಫಾಲೋ ಮಾಡಬೇಕಾದ ಸಲಹೆಗಳು.

Comments are closed.