ನಾಮಕರಣದ ಖುಷಿ ಸಮಯದಲ್ಲಿಯೂ ಕೂಡ ಬಹಳ ಸಿಟ್ಟಾದ ರೇವತಿ. ಯಾಕೆ ಗೊತ್ತೇ?? ರಿಯಾಕ್ಷನ್ ಹೇಗಿತ್ತು ಗೊತ್ತೇ?

ಚಂದನವನದ ಯುವರಾಜ ಎಂದೇ ಖ್ಯಾತಿಯಾಗಿರುವ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ಪತ್ನಿ ರೇವತಿ ಅವರು ಮೊನ್ನೆಯಷ್ಟೇ ಮುದ್ದಿನ ಮಗನಿಗೆ ಅವ್ಯಾನ್ ದೇವ್ ಎಂದು ಬಹಳ ವಿಭಿನ್ನವಾದ ಹಾಗೂ ವಿಶೇಷವಾದ ಹೆಸರನ್ನು ಇಟ್ಟಿದ್ದಾರೆ. ಮೊನ್ನೆ ನಡೆದ ನಾಮಕರಣ ಶುಭಸಮಯದಲ್ಲಿ ದೇವೇಗೌಡ ಅವರ ಇಡೀ ಕುಟುಂಬ ಭಾಗಿಯಾಗಿತ್ತು. ಮಗುವಿಗೆ ನಾಮಕರಣ ಹಾಗೂ ಕನಕಾಭಿಷೇಕ ಮಾಡಿಸಿ, ನಂತರ ಮಾಧ್ಯಮದ ಎದುರು ಮಗುವಿನ ಜೊತೆಗೆ ಬಂದರು ನಿಖಿಲ್ ಮತ್ತು ರೇವತಿ ದಂಪತಿ. ಈ ಸಮಯದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಿಖಿಲ್ ಅವರು ಮತ್ತು ರೇವತಿ ಅವರು ಇಬ್ಬರು ಸಹ ಸ್ವಲ್ಪ ಗರಂ ಆಗಿದ್ದಾರೆ..

ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಮಗ ಸಾಮಾನ್ಯನ ಹಾಗೆ ಬೆಳೆಯಬೇಕು, ಮಗುವನ್ನು ಸೋಷಿಯಲ್ ಮೀಡಿಯಾಗೆ ಪರಿಚಯ ಮಾಡುವುದಿಲ್ಲ ಎಂದು ಹೇಳಿದ್ದರು. ಹಾಗಾಗಿ ಇಷ್ಟು ದಿನಗಳವರೆಗೂ ಮಗನ ಯಾವ ಫೋಟೋವನ್ನು ಸಹ ನಿಖಿಲ್ ಅವರು ಶೇರ್ ಮಾಡಿಕೊಂಡಿರಲಿಲ್ಲ. ಇದೀಗ 9 ತಿಂಗಳ ಬಳಿಕ, ಮಗುವಿಗೆ ನಾಮಕರಣ ಮಾಡಿದಾಗ, ಮಗುವನ್ನು ಮಾಧ್ಯಮದವರಿಗೆ ಪರಿಚಯ ಮಾಡಿದ್ದಾರೆ, ಆಗ ನಡೆದ ಸುದ್ದಿಗೋಷ್ಠಿಯಲ್ಲಿ ನಿಖಿಲ್ ರೇವತಿ ದಂಪತಿಗೆ ಮಾಧ್ಯಮದವರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು, ಆಗ ಈ ಜೋಡಿ ಮಾತನಾಡಿ, ಮಾಧ್ಯಮದವರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತಿದ್ದರು, ಆಗ ಮಾಧ್ಯಮದವರು, “ಸರ್ ನೆಕ್ಸ್ಟ್ ಗುಡ್ ನ್ಯೂಸ್ ಯಾವಾಗ, ಅಂದ್ರೆ ಎರಡನೇ ಮಗು ಯಾವಾಗ..” ಎಂದು ಪ್ರಶ್ನೆ ಕೇಳಿದ್ದು, ಇದಕ್ಕೆ ಸ್ವಲ್ಪ ಗರಂ ಆಗಿದ್ದಾರೆ ನಿಖಿಲ್ ಮತ್ತು ರೇವತಿ ದಂಪತಿ.

Nikhil revathi

“ಇದು ತೀರಾ ವೈಯಕ್ತಿಕ ವಿಚಾರ ಸರ್. ಈಗಷ್ಟೇ ಮಗುವಿಗೆ ನಾಮಕರಣ ಮಾಡಿದ ಸಂತೋಷದಲ್ಲಿದ್ದೇವೆ, ಆ ವಿಷಯದ ಬಗ್ಗೆ ಮಾತನಾಡಿ ಸರ್. ದಯವಿಟ್ಟು ಈ ತರಹದ ಪ್ರಶ್ನೆಗಳನ್ನು ಕೇಳಬೇಡಿ ಸರ್, ಇದು ನನ್ನ ರಿಕ್ವೆಸ್ಟ್..” ಎಂದು ಹೇಳಿದ್ದಾರೆ ನಿಖಿಲ್. ಇನ್ನು ರೇವತಿ ಅವರಿಗು ಒಂದು ಪ್ರಶ್ನೆ ಕೇಳಿ, “ಮಗು ದೊಡ್ಡವನಾದ ಮೇಲೆ ಏನಾಗಬೇಕು ಎಂದು ಬಯಸುತ್ತೀರಾ..” ಎಂದು ಕೇಳಿದ್ದಾರೆ. ಆ ಪ್ರಶ್ನೆಗೆ ಸಿಟ್ಟಾದ ರೇವತಿ ಅವರು, ಉತ್ತರ ಕೊಟ್ಟಿದ್ದಾರೆ, “ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವುದು ನಮ್ಮ ಜವಾಬ್ದಾರಿ, ಒಳ್ಳೆಯ ಗುಣ, ಬುದ್ಧಿ, ಸ್ವಭಾವ ಹೇಳಿಕೊಡೋದು ನಮ್ಮ ಜವಾಬ್ದಾರಿ. ಮುಂದೆ ಏನಾಗುತ್ತಾರೆ ಎನ್ನುವುದನ್ನು ಅವರೇ ಡಿಸೈಡ್ ಮಾಡುತ್ತಾರೆ..” ಎಂದು ರೇವತಿ ಅವರು ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ರೇವತಿ ಅವರು ಸಿಟ್ಟಾಗಿದ್ದು ಫೋಟೋಗಳನ್ನು ನೋಡಿದರೆ ಗೊತ್ತಾಗುತ್ತದೆ.

Comments are closed.