Kannada News: ಆ ನಟನಲ್ಲಿ ನನ್ನ ತಮ್ಮ ಅಪ್ಪುವನ್ನು ನೋಡುತಿದ್ದೇನೆ ಎಂದ ಶಿವಣ್ಣ. ಆಯ್ಕೆ ಮಾಡಿದ್ದು ಯಾವ ನಟನನ್ನು ಗೊತ್ತೇ?? ಬೇಸರಗೊಂಡ ಫ್ಯಾನ್ಸ್.

Kannada News: ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ಕೊಡುಗೆ ಎಷ್ಟು ಅಪಾರವಾದದ್ದು ಎಂದು ನಮಗೆಲ್ಲ ಗೊತ್ತಿದೆ. ಇವರ ಮಕ್ಕಳಾದ ಶಿವಣ್ಣ, ರಾಘಣ್ಣ ಮತ್ತು ಅಪ್ಪು ಅವರು ನಾಯಕರಾಗಿ ಚಿತ್ರರಂಗಕ್ಕೆ ಬಂದು ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾರೆ. ಇವರು ಮೂವರು ಕೂಡ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. 2021ರಲ್ಲಿ ಪುನೀತ್ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿದ ವಿಚಾರ ಗೊತ್ತೇ ಇದೆ. ಅವರು ಇಲ್ಲದೆ ಇರುವ ನೋವು ಕುಟುಂಬದವರಲ್ಲಿ ಮತ್ತು ಅಭಿಮಾನಿಗಳಲ್ಲಿ ಇಂದಿಗು ಕೂಡ ಕಡಿಮೆ ಆಗಿಲ್ಲ.

ಅಪ್ಪು ಅವರನ್ನು ಹಲವು ಕಾರ್ಯಕ್ರಮಗಳಲ್ಲಿ ಎಲ್ಲರೂ ಮಿಸ್ ಮಾಡಿಕೊಳ್ಳುತ್ತಾರೆ. ಹಲವು ಸಾರಿ ಶಿವಣ್ಣ ರಾಘಣ್ಣ ಅವರು, ಅಶ್ವಿನಿ ಅವರು ವೇದಿಕೆ ಮೇಲೆ ಭಾವುಕರಾಗಿರುವುದನ್ನು ನೋಡಿದ್ದೇವೆ. ಶಿವಣ್ಣ ಅವರ ಇತ್ತೀಚಿನ ಸಿನಿಮಾ ವೇದ ಕನ್ನಡದಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಈ ಸಿನಿಮಾವನ್ನು ತೆಲುಗಿನಲ್ಲಿ ಕೂಡ ಬಿಡುಗಡೆ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿ ಹೈದರಾಬಾದ್ ನಲ್ಲಿ ವೇದ ಸಿನಿಮಾದ ದೊಡ್ಡ ಇವೆಂಟ್ ಇಂದನ್ನು ಅರೇಂಜ್ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಾಲಯ್ಯ ಅವರು ಅತಿಥಿಯಾಗಿ ಬಂದಿದ್ದರು. ಶಿವಣ್ಣ ಮತ್ತು ಬಾಲಯ್ಯ ಅವರು ಒಳ್ಳೆಯ ಸ್ನೇಹಿತರು. ಇದನ್ನು ಓದಿ..Kannada News: ಆ ಹೀರೋ ಮೇಲಿನ ಆಸೆಯಿಂದ ನೇರವಾಗಿ ತನ್ನ ಮದುವೆ ಕ್ಯಾನ್ಸಲ್ ಮಾಡಿ ಕೊಂಡ ತಮ್ಮನ್ನ. ಕಾರಣ ಏನಂತೆ ಗೊತ್ತೇ??

kannada news shivaraj kumar about allu arjun Kannada News:

ವೇದ ಇವೆಂಟ್ ನಲ್ಲಿ ಅಪ್ಪು ಅವರ ಎವಿ ಬಂದಾಗ ಶಿವಣ್ಣ ಅವರು ತಮ್ಮನನ್ನು ನೋಡಿ ಭಾವುಕರಾದರು. ಆಗ ಬಾಲಯ್ಯ ಅವರು ಶಿವಣ್ಣ ಅವರಿಗೆ ಸಮಾಧಾನ ಮಾಡಿದರು. ಬಳಿಕ ವೇದಿಕೆ ಮೇಲೆ ಮಾತನಾಡಿದ ಶಿವಣ್ಣ, “ಅಪ್ಪು ಇಲ್ಲ ಅಂತ ಅಂದುಕೊಳ್ಳಲ್ಲ, ಅಪ್ಪು ಯಾವಾಗಲೂ ಮನಸ್ಸಿನಲ್ಲಿ ಇರ್ತಾನೆ. ಇಲ್ಲಿ ಅಲ್ಲು ಅರ್ಜುನ್ ಅವರನ್ನು ನೋಡಿದಾಗ, ಅಪ್ಪು ನೆನಪಾಗುತ್ತೆ. ಅಲ್ಲು ಅರ್ಜುನ್ ನನಗೆ ಸಹೋದರನ ಹಾಗೆ ಅವರ ಡ್ಯಾನ್ಸಿಂಗ್ ಸ್ಟೈಲ್ ನಲ್ಲಿ ಅಪ್ಪುನ ನೋಡ್ತೀನಿ.” ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಮತ್ತು ಅಲ್ಲು ಅರ್ಜುನ್ ಅವರ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ ಶಿವಣ್ಣ. ಆದರೆ ಅಭಿಮಾನಿಗಳು ಮಾತ್ರ ಶಿವಣ್ಣ ಅವರು ಹೇಳಿದ ಈ ಮಾತುಗಳಿಗೆ ಬೇಸರ ಮಾಡಿಕೊಂಡಿದ್ದಾರೆ. ಇದನ್ನು ಓದಿ..Kannada News: ತೆಲುಗಿನಲ್ಲಿ ಬಾಲಯ್ಯ ರವರಿಗೆ ನಡೆಯುತ್ತಿದೆ ಮಹಾಮೋಸ. ನೂರು ಕೋಟಿ ಗಳಿಸುವ ಹೀರೋ ಆದರೂ, ಒಳ್ಳೆ ತನವೇ ಇವರಿಗೆ ಅಡ್ಡ. ಏನಾಗಿದೆ ಗೊತ್ತೇ?

Comments are closed.