Akkineni: ನಾಗಾರ್ಜುನ ರವರ ಇಬ್ಬರು ಮಕ್ಕಳು ಸಿನಿ ಜೀವನದಲ್ಲಿ ಸೋತದ್ದು ಯಾಕೆ ಗೊತ್ತೇ?? ಇದರ ಹಿಂದಿರುವ ಕಾರಣ ಕೇಳಿದರೆ, ಶಾಕ್ ಆಗ್ತೀರಾ. ಏನಾಗಿದೆ ಗೊತ್ತೇ?
Akkineni: ತೆಲುಗು ಚಿತ್ರರಂಗದಲ್ಲಿ ಅಕ್ಕಿನೇನಿ ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ಮೂರು ತಲೆಮಾರಿನಿಂದ ಈ ಕುಟುಂಬದವರು ತೆಲುಗು ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅಕ್ಕಿನೇನಿ ನಾಗೇಶ್ವರ್ ರಾವ್ ಅವರು ತೆಲುಗು ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು. ಇವರನ್ನು ಲೆಜೆಂಡ್ ಎಂದು ಈಗಲೂ ಸಹ ಯುವ ಕಲಾವಿದರು ಸ್ಪೂರ್ತಿಯಾಗಿ ಕಾಣುತ್ತಾರೆ. ಈ ಕುಟುಂಬದಿಂದ ಎರಡನೇ ತಲೆಮಾರಿನಲ್ಲಿ ನಾಗೇಶ್ವರ್ ಅವರ ಮಗ ನಾಗಾರ್ಜುನ ಅವರು ಬಂದರು.

ನಾಗಾರ್ಜುನ ಅವರು ಕೂಡ ತಂದೆಯ ಹಾಗೆ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಪಡೆದು ಸ್ಟಾರ್ ನಟ ಎಂದು ಹೆಸರು ಪಡೆದುಕೊಂಡರು. ಆದರೆ ಮೂರನೇ ತಲೆಮಾರಿನಲ್ಲಿ ನಾಗಾರ್ಜುನ ಅವರ ಮಕ್ಕಳು ನಾಗಚೈತನ್ಯ ಹಾಗೂ ಅಖಿಲ್ ಅಕ್ಕಿನೇನಿ ಇವರಿಬ್ಬರು ಕೆರಿಯರ್ ಶುರು ಮಾಡಿದರೆ, ಆದರೆ ಇವರಿಬ್ಬರಿಗೂ ಕೂಡ ಇನ್ನು ಕಷ್ಟಪಡುತ್ತಿದ್ದಾರೆ. ಇವರಿಬ್ಬರಿಗೆ ಇನ್ನು ಅಂದುಕೊಂಡ ಹಾಗೆ ಸಕ್ಸಸ್ ಸಿಕ್ಕಿಲ್ಲ. ಇಬರಿಬ್ಬರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದರು ಸಹ ಅವು ಯಶಸ್ಸು ಕಾಣುತ್ತಿದ್ದಾರೆ..
ಅಣ್ಣ ತಮ್ಮ ಇಬ್ಬರು ಸಹ ಕಷ್ಟಪಟ್ಟು ಸಿನಿಮಾ ಮಾಡಿ, ರಿಲೀಸ್ ಡೇಟ್ ಕೂಡ ಪ್ಲಾನ್ ಮಾಡಿ ರಿಲೀಸ್ ಮಾಡಿದರು ಕೂಡ ಆ ಸಿನಿಮಾಗಳು ಯಶಸ್ಸು ಕಾಣುತ್ತಿಲ್ಲ. ಇವರಿಬ್ಬರು ಕೆರಿಯರ್ ನಲ್ಲಿ ಮಾಡುತ್ತಿರುವ ಸಣ್ಣ ತಪ್ಪುಗಳಿಂದ ಹೀಗಾಗುತ್ತಿದೆ ಎಂದರೆ ತಪ್ಪಲ್ಲ. ನಾಗಚೈತನ್ಯ ಅವರ ವಿಷಯದಲ್ಲಿ ಅವರ ಒಂದೆರಡು ಸಿನಿಮಾಗಳು ಹಿಟ್ ಎನ್ನಿಸಿಕೊಂಡಿವೆ. ಅದನ್ನು ಬಿಟ್ಟರೆ ಅಷ್ಟೇನು ಜನಪ್ರಿಯತೆ ಇಲ್ಲದ ನಿರ್ದೇಶಕರ ಜೊತೆಗೆ ಸಿನಿಮಾ ಮಾಡಿ ಫ್ಲಾಪ್ ಗಳನ್ನು ಕಂಡಿದ್ದಾರೆ ಚೈತನ್ಯ.
ಇದು ಚೈತನ್ಯ ಅವರ ಕೆರಿಯರ್ ಗೆ ಮೈನಸ್ ಆಗಿದೆ. ಇನ್ನು ಅಖಿಲ್ ಅಕ್ಕಿನೇನಿ ಅವರ ಬಗ್ಗೆ ಹೆಚ್ಚಾಗಿ ಹೇಳುವುದೇ ಬೇಡ, ಇವರ ಕೆರಿಯರ್ ನಲ್ಲಿ 30 ಕೋಟಿ ಕೂಡ ದಾಟಿದ ಸಿನಿಮಾ ಇಲ್ಲ ಎಂದೇ ಹೇಳಬೇಕು. ಇದೀಗ 100 ಕೋಟಿ ವೆಚ್ಚದಲ್ಲಿ ಅಖಿಲ್ ಅವರ ಏಜೆಂಟ್ ಸಿನಿಮಾ ತಯಾರಾಗಿದ್ದು, ಈಗಾಗಲೇ 35 ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಆಗಿದೆ. ಈ ಸಿನಿಮಾ ಆದರೂ ಅಖಿಲ್ ಅವರಿಗೆ ಬ್ಲಾಕ್ ಬಸ್ಟರ್ ಹಿಟ್ ಕೊಡುತ್ತಾ ಎಂದು ಕಾದು ನೋಡಬೇಕಿದೆ.
Comments are closed.