Nikhil Kumaraswamy: ದೇಶವೇ ತಿರುಗಿನೋಡಿದ ಅಭಿಷೇಕ್ ಮದುವೆಗೆ, ನಿಖಿಲ್ ಯಾಕೆ ಹೋಗಿಲ್ಲ ಗೊತ್ತೇ?? ಅದೊಂದು ವಿಚಾರಣೆ ಕಾರಣನಾ?

Nikhil Kumaraswamy: ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ದಂಪತಿಯ ಮುದ್ದಿನ ಮಗ ಅಭಿಷೇಕ್ ಅಂಬರೀಶ್ ಅವರ ಮದುವೆ ಅವಿವಾ ಬಿದಪ ಅವರ ಜೊತೆಗೆ ನಿನ್ನೆ ಅದ್ಧೂರಿಯಾಗಿ ನಡೆದಿದೆ. ಸ್ಯಾಂಡಲ್ ವುಡ್ ನ ಸ್ಟಾರ್ ವೆಡ್ಡಿಂಗ್ ಆಗಿತ್ತು ಈ ಮದುವೆ. ಅಭಿಷೇಕ್ ಮದುವೆಗೆ ಶುಭಕೋರಲು ಚಿತ್ರರಂಗದ ಸಾಕಷ್ಟು ಗಣ್ಯರು ಬಂದಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ತೆಲುಗು ನಟ ಮೋಹನ್ ಬಾಬು, ವೆಂಕಯ್ಯ ನಾಯ್ಡು ಅವರು..

nikil kumaraswamy absense for abhishek marriage Nikhil Kumaraswamy:

ಕನ್ನಡದ ಕಿಚ್ಚ ಸುದೀಪ್ ಅವರು, ಯಶ್ ಅವರು, ಉಪೇಂದ್ರ ಅವರು, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು, ಪ್ರಜ್ವಲ್ ದೇವರಾಜ್, ಮೇಘನಾ ರಾಜ್ ಅವರು ಸೇರಿದಂತೆ ಚಂದನವನದ ಸಾಕಷ್ಟು ಕಲಾವಿದರು ಮದುವೆಗೆ ಬಂದಿದ್ದರು. ಆದರೆ ನಿಖಿಲ್ ಕುಮಾರಸ್ವಾಮಿ ಅವರು ಅಭಿಶೇಕ್ ಅವರ ಮದುವೆಗೆ ಬಂದಿರಲಿಲ್ಲ. ಅಭಿಷೇಕ್ ಹಾಗೂ ನಿಖಿಲ್ ಇಬ್ಬರು ಕೂಡ ಒಳ್ಳೆಯ ಸ್ನೇಹಿತರು. ಇದನ್ನು ಓದಿ..Film News: ಶಿವಣ್ಣ ರವರ ಭೈರತಿ ರಣಗಲ್ ರವರ ಸಿನೆಮಾಗೆ ನಾಯಕಿ ಯಾರು ಗೊತ್ತೇ? ತಿಳಿದರೆ ಕುಣಿದು ಎರಡು ಸ್ಟೆಪ್ ಹಾಕ್ತಿರಾ.

ಕೆಲ ವರ್ಷಗಳಿಂದ ಇವರಿಬ್ಬರ ನಡುವೆ ಒಳ್ಳೆಯ ಸ್ನೇಹವಿತ್ತು, ಆದರೆ ಮಂಡ್ಯ ಲೋಕಸಭಾ ಚುನಾವಣೆ ವೇಳೆ ನಡೆದ ಘಟನೆಗಳಿಂದ ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿತ್ತು. ಆಗಿನ ಎಲೆಕ್ಷನ್ ನಲ್ಲಿ ನಿಖಿಲ್ ಸೋತಿದ್ದರು. ಹಾಗೂ ನಡೆದ ಕೆಲವು ಮಾತುಗಳು ಘಟನೆಗಳಿಂದ ಇಬ್ಬರು ಮಾತನಾಡುವುದು ಕಡಿಮೆ ಆಗಿತ್ತು. ನಿಖಿಲ್ ಅವರು ಕೊನೆಯದಾಗಿ ಅಮರ್ ಸಿನಿಮಾ ಬಿಡುಗಡೆ ವೇಳೆ ಅಭಿಷೇಕ್ ಅವರಿಗೆ ವಿಶ್ ಮಾಡಿದ್ದರು, ಅದಕ್ಕೆ ಅಭಿಷೇಕ್ ಕೂಡ ಸ್ಪಂದಿಸಿದ್ದರು.

ಅದಾದ ಬಳಿಕ ಇಬ್ಬರು ಮಾತನಾಡಿದ್ದು ಇಲ್ಲ, ಮತ್ತೊಂದು ವಿಚಾರ ಏನು ಎಂದರೆ, ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಅವರ ಕಡೆಯಿಂದ ಮದುವೆಗೆ ಆಮಂತ್ರಣ ಪತ್ರ ಕೂಡ ಹೋಗಿಲ್ಲ ಎನ್ನಲಾಗಿದೆ. ಕುಮಾರಸ್ವಾಮಿ ಅವರ ಮನೆಗೆ ಆಮಾಂತ್ರಣ ಪತ್ರ ಹೋಗಿಲ್ಲ ಎನ್ನುವ ಕಾರಣಕ್ಕೆ ಅವರ ಕುಟುಂಬದವರು ನಿಖಿಲ್ ಕುಮಾರಸ್ವಾಮಿ ಕೂಡ ಅಭಿಷೇಕ್ ಅಂಬರೀಶ್ ಅವರ ಮದುವೆಗೆ ಬಂದಿಲ್ಲ.. ಇದನ್ನು ಓದಿ..Sree Leela: ತಾಯಿಗೆ ಕೊಟ್ಟ ಮಾತಿಗಾಗಿ ಗಟ್ಟಿ ನಿರ್ಧಾರ ಮಾಡಿಯೇ ಬಿಟ್ಟ ಶ್ರೀ ಲೀಲಾ: ಚಿಂತೆಯಲ್ಲಿ ನಿರ್ದೇಶಕರು, ಹೀರೋಗಳು. ಏನಾಗಿದೆ ಗೊತ್ತೇ??

Comments are closed.