Pradeep Eshwar: ಮಾದ್ಯಮದಲ್ಲಿ ಬಂದ ವಿಡಿಯೋ ನೋಡಿ ಸಹಾಯ ಕೇಳಿ ಶಾಸಕ ಈಶ್ವರ್ ಬಳಿ ಹೋದ ಹಿರಿಯರಿಗೆ ಸಿಕ್ಕದ್ದು ಏನು ಗೊತ್ತೇ? ಪಾಪ ಗುರು 500 KM ಇಂದ ಬಂದಿದ್ರಂತೆ.

Pradeep Eshwar: ಇತ್ತೀಚೆಗೆ ಶಾಸಕರಾಗಿ ಆಯ್ಕೆ ಆಗಿರುವ ಪ್ರದೀಪ್ ಈಶ್ವರ್ (Pradeep Eshwar), ನಮಸ್ತೆ ಚಿಕ್ಕಬಳ್ಳಾಪುರ (Chikkaballapura) ಎನ್ನುವ ಕಾರ್ಯಕ್ರಮ ಶುರು ಮಾಡಿದ್ದಾರೆ. ಈ ಮೂಲಕ ಜನರಿಗೆ ಹಣಕಾಸಿನ ವಿಷಯದಲ್ಲಿ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ. ಪ್ರತಿದಿನ ತಮ್ಮ ಕ್ಷೇತ್ರದ ಎಲ್ಲಾ ಜನರ ಮನೆಗಳಿಗೆ ತೆರಳಿ ಅವರ ಸಮಸ್ಯೆಗಳನ್ನು ಕೇಳಿ, ಅದನ್ನು ಪರಿಹಾರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರದೀಪ್ ಅವರಿಂದ ಹಣಕಾಸಿನ ಸಹಾಯ ಸಿಗುತ್ತಿದೆ ಎನ್ನುವ ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿದೆ.

pradeep eeshwar latest news Pradeep Eshwar:

ಸೋಷಿಯಲ್ ಮೀಡಿಯಾದಲ್ಲಿ ಪ್ರದೀಪ್ ಅವರ ಸಹಾಯದ ಬಗ್ಗೆ ಅಷ್ಟು ಸುದ್ದಿಗಳು ಕೇಳಿಬಂದ ನಂತರ, 500ಕಿಮೀ ದೂರದಿಂದ ಬಂದ ವೃದ್ಧ ಮಹಿಳೆಯ ಹೆಸರು ಕಮಲಾಬಾಯಿ, ಇವರು ಕಲಬುರಗಿಯಿಂದ ತಮ್ಮ ಮಗ ಮಂಜುನಾಥ್ ಜೊತೆಗೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಬಂದರೆ ಪ್ರದೀಪ್ ಅವರಿಂದ ಸಹಾಯ ಸಿಗುತ್ತದೆ ಎಂದು ಇಲ್ಲಿಗೆ ಬಂದಿದ್ದಾರೆ. ಕಮಲಾಬಾಯಿ ತಮ್ಮ ಮಗ ಮಂಜುನಾಥ್ ಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಇದನ್ನು ಓದಿ..Gruha lakshmi: ಗೃಹ ಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್- ಮತ್ತಷ್ಟು ಜನರ ಹೊರಕ್ಕೆ, ಈ ಬಾರಿ ಹೊರಹೋದದ್ದು ಯಾರು ಗೊತ್ತೇ??

ಇದರಿಂದ ಆರೇಳು ಲಕ್ಷ ಖರ್ಚಾಗಿದ್ದು, ಸಾಲ ಮಾಡಿ ಮಗನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಈಗ ಮನೆ ನಡೆಸಲು ಕಷ್ಟ ಆಗುತ್ತಿದ್ದು, ಸಾಲಗಾರರ ಸಮಸ್ಯೆ ಕೂಡ ಹೆಚ್ಚಾಗುತ್ತಿದೆಯಂತೆ. ಸಿಎಂ ಪರಿಹಾರ ನಿಧಿಗೆ ಅಪ್ಲೈ ಮಾಡಿದ್ದರು ಅವರಿಗೆ ಪರಿಹಾರ ಸಿಕ್ಕಿಲ್ಲ. ಜೊತೆಗೆ, ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದ್ದಾರೆ, ಆದರೆ ಸುಧಾಕರ್ ಅವರಿಂದಲೂ ಯಾವುದೇ ಸಹಾಯ ಸಿಕ್ಕಿಲ್ಲ. ಹಾಗಾಗಿ ಪ್ರದೀಪ್ ಅವರಿಂದ ಸಹಾಯ ಸಿಗುತ್ತಿದೆ ಎಂದು ಗೊತ್ತಾಗಿ, ಮಗನ ಜೊತೆ ಬಂದಿದ್ದಾರೆ.

ಆದರೆ ಚಿಕ್ಕಬಳ್ಳಾಪುರಕ್ಕೆ ಬಂದಮೇಲೆ, ಪ್ರದೀಪ್ ಈಶ್ವರ್ ಅವರನ್ನು ಸಂಪರ್ಕ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಪ್ರದೀಪ್ ಅವರಿಗೆ ಕಾಲ್ ಮಾಡಿದರೆ ಅವರು ಕಾಲ್ ಸ್ವೀಕರಿಸಿಲ್ಲ. ಬೇರೆ ರೀತಿಯಲ್ಲಿ ಪ್ರಯತ್ನಪಟ್ಟರು ಕೂಡ, ಪ್ರದೀಪ್ ಅವರನ್ನು ಕಾಂಟ್ಯಾಕ್ಟ್ ಮಾಡಲು ಸಾಧ್ಯವಾಗದೆ, ಬರಿಗೈಯಲ್ಲಿ ವಾಪಸ್ ಹೋಗಿದ್ದಾರೆ. ಈ ವಿಚಾರ ತಿಳಿದ ನೆಟ್ಟಿಗರು, ವೃದ್ಧ ಮಹಿಳೆ ಕಮಲಾಬಾಯಿ ಅವರಿಗೆ ಹೀಗಾಗಬಾರದಿತ್ತು ಎನ್ನುತ್ತಿದ್ದಾರೆ. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿರುವ ಅಲ್ಲಲ್ಲಿ ಖಾಲಿ ಇರುವ ಜಾಗದಲ್ಲಿ ಈ ಬಿಸಿನೆಸ್ ಮಾಡಿ, ಕೈ ತುಂಬಾ ಕಾಸು, ನಿಮಗೆ ನೀವೇ ಬಾಸ್. ಲಕ್ಷ ಲಕ್ಷ ಆದಾಯ ಫಿಕ್ಸ್. ಏನು ಗೊತ್ತೇ?

Comments are closed.