Siddaramaiah: ಕರ್ನಾಟಕದಲ್ಲಿ ಹುಲಿಯಂತೆ ಇದ್ದ ಸಿದ್ದು ರವರಿಗೆ ದೆಹಲಿಗೆ ಹೋದ ತಕ್ಷಣ ಅವಮಾನ ಆಯ್ತಾ? ಸೋನಿಯಾ ಮನೆಯಲ್ಲಿ ಇದೆಂತಹ ಎಡವಟ್ಟು, ಯಾವ ಪರಿಸ್ಥಿತಿ ಗೊತ್ತೇ?

Siddaramaiah: ರಾಜ್ಯದಲ್ಲಿ ಈಗ ಕಾಂಗ್ರೆಸ್ ಅಬ್ಬರ ಜೋರಾಗಿದೆ, ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯನವರು ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಅಧಿಕಾರಕ್ಕೆ ಬಂದಿದ್ದಾರೆ. ಇಬರಿಬ್ಬರು ಈಗ ಸಂಪುಟ ವಿಸ್ತರಣೆಗಾಗಿ ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ AICC ವರಿಷ್ಠೆ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಭೇಟಿ ನೀಡಿದಾಗ ಅವರಿಗೆ ಅಲ್ಲಿ ಅವಮಾನ ಆಗಿದೆ ಎನ್ನುವ ವಿಷಯ ಈಗ ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಏನಾಗಿದೆ ಗೊತ್ತಾ?

siddaramaiah fans are not happy about sonia watchman behavior Siddaramaiah:

ದಕ್ಷಿಣ ಭಾರತದ ರಾಜ್ಯದಲ್ಲಿ ಈಗ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದೆ, ಇದರಿಂದ ರಾಷ್ಟ್ರನಾಯಕರು ಸಂತೋಷಗೊಂಡಿದ್ದಾರೆ. ರಾಜ್ಯದಲ್ಲಿ ಸಂಪುಟ ವಿಸ್ತರಣೆ ಆಗಬೇಕಿರುವುದರಿಂದ, ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಜೊತೆಗೆ ಸಭೆಗಳು ನಡೆಯುತ್ತಿದೆ. ಈ ವೇಳೆ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರ ಮನೆಗೆ ಭೇಟಿ ಕೊಟ್ಟಾಗ, ಅಲ್ಲಿನ ಭದ್ರತಾ ಸಿಬ್ಬಂದಿಗಳು ಎಡವಟ್ಟು ಮಾಡಿದ್ದಾರೆ. ಇದನ್ನು ಓದಿ..Bank News: ಇದಪ್ಪ ಅದೃಷ್ಟ ಅಂದ್ರೆ, ಹಣ ಗುಳುಂ ಮಾಡದೆ, ವಾಪಸ್ಸು ನೀಡಲು ಮುಂದಾದ ಬ್ಯಾಂಕ್ ಗಳು- ಜೂನ್ 1 ರಿಂದ ಕರೆ ಬಂದು, ಹಣ ಕೂಡ ಕೊಡ್ತಾರೆ.

ಸಭೆ ನಂತರ ಸೋನಿಯಾ ಗಾಂಧಿ ಅವರ ಮನೆಗೆ ಹೋದಾಗ, ಅಲ್ಲಿನ ಭದ್ರತಾ ಸಿಬ್ಬಂದಿಗಳು ಸಿದ್ಧರಾಮಯ್ಯ ಅವರ ಕಾರನ್ನು ನಿಲ್ಲಿಸಿದ್ದಾರೆ. ಅವರನ್ನು ಮನೆಯೊಳಗೆ ಹೋಗಲು ಬಿಟ್ಟಿಲ್ಲ, ಸಿದ್ದರಾಮಯ್ಯ ಅವರ ಜೊತೆಗಿದ್ದವರು ಭದ್ರತಾ ಸಿಬ್ಬಂದಿಗಳಿಗೆ ತಿಳಿಸಿ ಹೇಳಿದರು ಕೇಳದೆ, ಅವರು ಸಿದ್ದರಾಮಯ್ಯ ಅವರನ್ನು ಮನೆಯೊಳಗೆ ಬಿಟ್ಟಿಲ್ಲ. ಹೀಗಾಗಿದ್ದಕ್ಕೆ, ಸಿದ್ದರಾಮಯ್ಯ ಅವರು ಕೆಲ ಸಮಯ ಮನೆಯ ಗೇಟ್ ಹತ್ತಿರ ಸಿದ್ದರಾಮಯ್ಯ ಅವರು ಕಾಯುವ ಹಾಗೆ ಆಗಿದೆ.

ನಂತರ ಸಿದ್ದರಾಮಯ್ಯ ಅವರ ಸಹಾಯಕರು ಭದ್ರತಾ ಸಿಬ್ಬಂದಿಗಳಿಗೆ ಮತ್ತೊಮ್ಮೆ ತಿಳಿಸಿ ಹೇಳಿದಾಗ ಅವರು ಒಳಗೆ ಬಿಟ್ಟಿದ್ದಾರೆ. ಬಳಿಕ ಗೇಟ್ ಹಾಕಿದ್ದಾರೆ. ಈ ರೀತಿ ಸಿದ್ದರಾಮಯ್ಯ ಅವರನ್ನು ಮನೆಯೊಳಗೆ ಬಿಡದ ವಿಚಾರ ಈಗ ಚರ್ಚೆಯಾಗುತ್ತಿದೆ. ನಿನ್ನೆ ಬೆಳಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ನಡುವೆ ಚರ್ಚೆ ನಡೆದ ನಂತರ, 24 ಸಚಿವರ ಹೆಸರುಗಳನ್ನು ಅಂತಿಮಗೊಳಿಸಲಾಗಿದ್ದು, ಇಂದು ಅವರ ಪ್ರಮಾಣ ವಚನ ನೆರವೇರಬಹುದು ಎನ್ನಲಾಗಿದೆ. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?

Comments are closed.