Dk Shivakumar: ಗ್ಯಾರಂಟೀ ಚರ್ಚೆಗಳ ನಡುವೆ, ಮಹತ್ವದ ಹೆಜ್ಜೆ ಇತ್ತ ಡಿ ಕೆ- ಇದು ಕಣ್ರೀ ನಿಜಕ್ಕೂ ಬೇಕಾಗಿರೋದು ಭೇಷ್ ಎಂದ ನೆಟ್ಟಿಗರು. ಏನು ಗೊತ್ತೇ??
Dk Shivakumar: ನಮ್ಮ ರಾಜ್ಯದಲ್ಲಿ ಈಗ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷವು 135 ಕ್ಷೇತ್ರಗಳಲ್ಲಿ ಗೆದ್ದು, ಸಿಎಂ ಆಗಿ ಸಿದ್ದರಾಮಯ್ಯ ಅವರು ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಚುನಾವಣೆ ಸಮಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಜನರಿಗೆ ತಿಳಿಸಿತ್ತು.

ಅವುಗಳನ್ನು ಜಾರಿಗೆ ತರುವ ಬಗ್ಗೆ ಹಾಗೂ ಉದ್ಯೋಗ ಇಲ್ಲದೆ ಇರುವವರಿಗೆ ಉದ್ಯೋಗ ಕೊಡುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಇದೇ ವಿಚಾರವಾಗಿ ಉದ್ಯೋಗಕ್ಕಾಗಿ ಕಾಯುತ್ತಿರುವವರು ಡಿಕೆ ಶಿವಕುಮಾರ್ ಅವರ ಮನೆಯ ಎದುರು ಬೀಡುಬಿಟ್ಟಿದ್ದರು, ಅವರಿಗೆಲ್ಲಾ ಡಿಕೆಶಿ ಅವರು ಭರವಸೆ ಹಾಗೂ ನಂಬಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಉದ್ಯೋಗದ ಕುರಿತು ಸಮಸ್ಯೆಗಳು ಬಗೆಹರಿಯುತ್ತದೆ,ರಾಜ್ಯ ಸರ್ಕಾರದ ಆದ್ಯತೆ ಅದು ಎಂದಿದ್ದಾರೆ. ಇದನ್ನು ಓದಿ..Kannada News: ಮೊನ್ನೆ ಮೊನ್ನೆ ಬಂದರೂ, ಪ್ರತಾಪ್ ಸಿಂಹ ರವರಿಗೆ ಪ್ರದೀಪ್ ಈಶ್ವರ್ ನೇರವಾಗಿ ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ ಎಂದ ಫ್ಯಾನ್ಸ್.
ಉದ್ಯೋಗ ಆಕಾಂಕ್ಷಿಗಳ ಗುಂಪಿನ ಜೊತೆಗೆ ಮಾತನಾಡಿದ ಅವರು, “ಓದಿದ್ದು ಉದ್ಯೋಗ ಇಲ್ಲದೆ ಇರುವವರಿಗೆ ಉದ್ಯೋಗ ಕಲ್ಪಿಸಿಕೊಡುವುದು ನಮ್ಮ ಕರ್ತವ್ಯ, ಈಗ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಾರ್ವಜನಿಕರಿಗೆ ಭರವಸೆ ನೀಡುತ್ತೇವೆ. ಉದ್ಯೋಗದ ಸಮಸ್ಯೆ ಬಗೆಹರಿಯುವ ಹಾಗೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ಆದ್ಯತೆ ಆಗಿದೆ..” ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸವನ್ನು ನಾವು ಶುರು ಮಾಡುತ್ತೇವೆ.. ಒಂದು ಅಥವಾ ಎರಡೇ ದಿನದಲ್ಲಿ ಇದು ನಡೆಯುತ್ತದೆ ಎಂದು ಹೇಳೋಕೆ ಆಗದು, ಆದರೆ ಖಂಡಿತವಾಗಿ ಮಾಡುತ್ತೇವೆ..ಎಂದು ಭರವಸೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ ಉದ್ಯೋಗ ಆಕಾಂಕ್ಷಿಗಳು ಕರ್ನಾಟಕ ಪವರ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 1500ಕ್ಕಿಂತ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದ್ದರು, ಅದಕ್ಕೀಗ ಡಿಕೆಶಿ ಅವರು ಉತ್ತರ ಕೊಟ್ಟಿದ್ದಾರೆ. ಇದನ್ನು ಓದಿ..Google 7A vs 1 Plus: ನೀವು ಒನ್ ಪ್ಲಸ್ ಹಾಗೂ ಗೂಗಲ್ 7 A ಇವುಗಳಲ್ಲಿ ಯಾವುದನ್ನೂ ಖರೀದಿಸುವುದು ಉತ್ತಮ ಗೊತ್ತೇ?? ಇದೆ ನೋಡಿ ಬೆಸ್ಟ್ ಆಯ್ಕೆ. ಕಡಿಮೆ ಬೆಲೆ, ಲಾಭ ಎಲ್ಲಾ ಲೆಕ್ಕಾಚಾರ
Comments are closed.