Kannada News: ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಟನೆ ಮಾಡಿರುವ ಈತ, ಕಾಂತಾರ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯಾರು ಗೊತ್ತೇ??

Kannada News: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಶುರುವಾಗಿರುವ ಫ್ಯಾಂಟಸಿ ಧಾರವಾಹಿ ತ್ರಿಪುರ ಸುಂದರಿ (Tripura Sundari) ಎಲ್ಲರಿಗೂ ಇಷ್ಟವಾಗುತ್ತಿದೆ. ಈ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ (Divya Suresh) ಮತ್ತು ನನ್ನರಸಿ ರಾಧೆ ಧಾರಾವಾಹಿಯ ಅಭಿನವ್ ವಿಶ್ವನಾಥನ್ (Abhinav Vishwanathan) ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ, ಈ ಸೋಮವಾರದಿಂದ ಧಾರವಾಹಿ ಶುರುವಾಗಿದ್ದು, ಜನರು ಬಹಳ ಇಷ್ಟಪಟ್ಟು ಈ ಧಾರವಾಹಿ ನೋಡುತ್ತಿದ್ದಾರೆ. ಗಂಧರ್ವ ಲೋಕವನ್ನು ಈಗ ಧನಂಜಯ ಆಕ್ರಮಣ ಮಾಡಿಕೊಂಡಿದ್ದಾನೆ, ಅವನಿಂದ ಗಂಧರ್ವ ಲೋಕವನ್ನು ವಾಪಸ್ ಪಡೆಯಬೇಕು ಎಂದರೆ ಗಂಧರ್ವ ಲೋಕದ ರಾಜಕುಮಾರ ಬರಬೇಕು.

27 ವರ್ಷಗಳ ಹಿಂದೆ ರಾಜಕುಮಾರನನ್ನು ಸೂರ್ಯದೇವನ ಆಶೀರ್ವಾದದಿಂದ ಭೂಮಿಗೆ ಕಳಿಸಲಾಗಿತ್ತು. ರಾಜಕುಮಾರ 27 ವರ್ಷಗಳಿಂದ ಭೂಮಿಯಲ್ಲಿ ಅರಸು ಮನೆತನದಲ್ಲಿ ಬೆಳೆಯುತ್ತಿದ್ದಾನೆ. ಈಗ ರಾಜಕುಮಾರನನ್ನು ಮತ್ತೆ ಗಂಧರ್ವ ಲೋಕಕ್ಕೆ ಕರೆದುಕೊಂಡು ಹೋಗಲು ಗಂಧರ್ವ ಕನ್ಯೆ ಅಮ್ರಪಾಲಿ ಭೂಲೋಕಕ್ಕೆ ಬಂದಿದ್ದಾಳೆ. ಭೂಮಿಯಲ್ಲಿರುವ ಮನುಷ್ಯರ ಮಾತುಗಳು , ಅವರ ರೀತಿ ನೀತಿ ಇದ್ಯಾವುದು ಕೂಡ ಅಮ್ರಪಾಲಿಗೆ ಸರಿಯಾಗಿ ಅರ್ಥವಾಗುತ್ತಿಲ್ಲ, ಅಮ್ರಪಾಲಿ ರಾಜಕುಮಾರನನ್ನು ಹುಡುಕುವ ದಾರಿಯಲ್ಲಿ ಒಂದು ದೇವಸ್ಥಾನದಲ್ಲಿ ಜಾತ್ರೆಯಲ್ಲಿದ್ದಾಳೆ, ಅದೇ ದೇವಸ್ಥಾನದಲ್ಲಿ ರಾಜಕುಮಾರ ಪ್ರದ್ಯುಮ್ನ ಕೂಡ ಇದ್ದಾನೆ. ಇದನ್ನು ಓದಿ..Kannada News: ತನ್ನ ಮಗಳು ಮಾಡಿದ ಕೆಲಸಕ್ಕೆ ಸ್ಥಳದಲ್ಲಿಯೇ ಕಣ್ಣೀರಿಟ್ಟ ಮಹೇಶ್ ಬಾಬು: ಚಿಕ್ಕ ವಯಸ್ಸಿನಲ್ಲಿಯೇ ಮಾಡಿದ್ದೇನು ಗೊತ್ತೆ?

kannada news swaraj Kannada News:

ಇವರಿಬ್ಬರು ಭೇಟಿ ಆಗುತ್ತಾರಾ ಎನ್ನುವುದು ಸಧ್ಯದ ಕುತೂಹಲ. ಇನ್ನು ಈ ಕತೆಯಲ್ಲಿ ಭೂಲೋಕದ ರೀತಿ ನೀತಿ ಬಗ್ಗೆ ಸರಿಯಾಗಿ ಗೊತ್ತಿಲ್ಲದೆ ಅಮ್ರಪಾಲಿ ಕಷ್ಟಪಡುವಾಗ, ನಾಗದೇವ ಪ್ರತ್ಯಕ್ಷವಾಗಿ ಇಲ್ಲಿನ ರೀತಿನೀತಿಗಳ ಬಗ್ಗೆ ಅಮ್ರಪಾಲಿಗೆ ತಿಳಿಸಿ ಹೇಳಿದ್ದಾನೆ. ಈ ನಾಗದೇವನ ಪಾತ್ರದಲ್ಲಿ ನಟಿಸಿರುವುದು ಮತ್ಯಾರು ಅಲ್ಲ, ಕಾಂತಾರ (Kantara) ಸಿನಿಮಾದಲ್ಲಿ ಗುರುವ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಸ್ವರಾಜ್ ಶೆಟ್ಟಿ (Swaraj Shetty) ಅವರು, ಕಾಂತಾರ ಸಿನಿಮಾ ಇವರಿಗೆ ಒಳ್ಳೆಯ ಹೆಸರು ಮತ್ತು ಅವಕಾಶಗಳು ಎರಡನ್ನು ತಂದುಕೊಡುತ್ತಿದ್ದು, ಸ್ವರಾಜ್ ಶೆಟ್ಟಿ ಅವರು ಈಗ ತ್ರಿಪುರ ಸುಂದರಿ ಧಾರವಾಹಿ ಮೂಲಕ ಕಿರುತೆರೆ ಲೋಕಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಇದನ್ನು ಓದಿ.. Kannada News: ವಿದೇಶದಲ್ಲಿ ಮದುವೆಯಾಗುವ ಸ್ಕೆಚ್ ಹಾಕಿರುವ ನರೇಶ್-ಪವಿತ್ರ: ಜಸ್ಟ್ ಮದುವೆಗಾಗಿ ಖರ್ಚು ಮಾಡುತ್ತಿರುವುದು ಎಷ್ಟು ಕೋಟಿ ಗೊತ್ತೇ??

Comments are closed.