Kodi Mutt: ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಕೇಳಿದಕ್ಕೆ ಷಾಕಿಂಗ್ ಹೇಳಿಕೆ ಕೊಟ್ಟ ಕೊಡಿ ಮಠ ಸ್ವಾಮೀಜಿ. ಹೇಳಿದ್ದೇನು ಗೊತ್ತೇ??

Kodi Mutt: ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಕೇಳಿದಕ್ಕೆ ಷಾಕಿಂಗ್ ಹೇಳಿಕೆ ಕೊಟ್ಟ ಕೊಡಿ ಮಠ ಸ್ವಾಮೀಜಿ. ಹೇಳಿದ್ದೇನು ಗೊತ್ತೇ??

Kodi Mutt: ಕೊಡಿ ಮಠದ (Kodi Mutt) ಶ್ರೀಗಳು ಆಗಾಗ ನಮ್ಮ ರಾಜ್ಯದ ಬಗ್ಗೆ ಮತ್ತು ದೇಶದ ಬಗ್ಗೆ ಭವಿಷ್ಯ ನುಡಿದು ಸುದ್ದಿಯಾಗುತ್ತಾರೆ. ಈ ಹಿಂದೆ ಶ್ರೀಗಳು ನಮ್ಮ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದರು. ಈಗ ನಮ್ಮ ರಾಜ್ಯ ಸರ್ಕಾರ ತನ್ನ ಅಧಿಕಾರದ ಅವಧಿಯನ್ನು ಪೂರ್ತಿ ಮಾಡುತ್ತಾ ಎನ್ನುವ ಪ್ರಶ್ನೆ ಮೂಡಿಬಂದಿದ್ದು, ಅದಕ್ಕೆ ಸಹ ಶ್ರೀಗಳು (Kodi Mutt) ಉತ್ತರ ನೀಡಿದ್ದಾರೆ. ಇದೀಗ ಶ್ರೀಗಳು ನೀಡಿರುವ ಉತ್ತರದ ಬಗ್ಗೆ ಚರ್ಚೆಯಾಗುತ್ತಿದೆ.

kodi mutt statement about 2024 elections
kodi mutt statement about 2024 elections

“ಬಾಯಿಗೆ ಬಡಿಯುವ ವಾಸನೆ ಮೂಗಿಗೆ ಬಡಿಯುವುದಿಲ್ಲ. ಆದರೆ ಊರಿನಲ್ಲಿ ಬರುವ ಎಲ್ಲಾ ವಾಸನೆಗಳು ಮೂಗಿಗೆ ಗೊತ್ತಾಗುತ್ತದೆ.” ಎಂದು ಶ್ರೀಗಳು (Kodi Mutt) ಹೇಳಿದ್ದು, ಈ ಮಾತಿನ ಅರ್ಥ ಏನು ಎಂದು ಜನರಿಗೆ ಇನ್ನು ಅರ್ಥವಾಗಿಲ್ಲ. ಅರ್ಥ ಏನಿರಬಹುದು ಎಂದು ಜನರು ಈಗ ತಲೆಕೆಡಿಸಿಕೊಳ್ಳುವ ಹಾಗೆ ಆಗಿದೆ. ಆದರೆ ಶ್ರೀಗಳ (Kodi Mutt) ಮಾತಿನ ಅರ್ಥ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದಾಗ ಗೊತ್ತಾಗಿರುವುದು ಏನು ಎಂದರೆ, ಕಾಂಗ್ರೆಸ್ (Congress) ಪಕ್ಷದ ಒಳಗೆ ಕೆಲವು ಭಿನ್ನಾಭಿಪ್ರಾಯಗಳು ಇದ್ದರು ಕೂಡ. ಅದೆಲ್ಲವೂ ಕೂಡ ಹೊರಗೆ ಬರದೇ ಒಳಗೆಯೇ ಇತ್ಯರ್ಥ ಆಗುತ್ತದೆ ಎಂದು ಅರ್ಥವಾಗಿದೆ. ಇದನ್ನು ಓದಿ..Vande Bharat: ವಂದೇ ಭರತ್ ಅಭಿವೃದ್ಧಿಯ ವೇಗ ಕಂಡು ಕೆಲವರು ವಿರೋಧ ಮಾಡುತ್ತಿರುವುದು ಯಾಕೆ? ಎಲ್ಲೆಂದರಲ್ಲಿ ಕಲ್ಲು ತೂರುತ್ತಿವರು ಯಾರು? ಸಂಪೂರ್ಣ ವಿವರಣೆ.

ಹಾಗೆಯೇ ವಿರೋಧ ಪಕ್ಷದಲ್ಲಿ ಭಿನ್ನಮತ ಜಾಸ್ತಿಯಾಗುತ್ತದೆ ಎನ್ನುವ ಅರ್ಥವಿದೆ ಎಂದು ಕೂಡ ಹೇಳಲಾಗುತ್ತಿದೆ. ಶ್ರೀಗಳ (Kodi Mutt) ಬಳಿ ಲೋಕಸಭೆಯ ಎಲೆಕ್ಷನ್ ಬಗ್ಗೆ ಕೂಡ ಪ್ರಶ್ನೆ ಕೇಳಲಾಯಿತು. ಲೋಕಸಭಾ ಎಲೆಕ್ಷನ್ ನಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂದು ಕೇಳಿದ್ದಕ್ಕೆ ಉತ್ತರ ಕೊಟ್ಟ ಶ್ರೀಗಳು, ಸತ್ಯ ಯಾರಿಗೂ ಇಷ್ಟ ಅಗುವುಡಿಲ್ಲ, ಎಲ್ಲರಿಗೂ ಅಸತ್ಯವೇ ಇಷ್ಟ.. ನಾನೇನಾದರು ಆ ಪ್ರಶ್ನೆಗೆ ಉತ್ತರ ಕೊಟ್ಟರೆ, ನಾನು ಮಠಕ್ಕೆ ತಲುಪುವುದಿಲ್ಲ.. ನೀವೇ ಕಾದು ನೋಡಿ, ಸಮಯ ಬಂದಾಗ ನಾನು ಹೇಳುತ್ತೇನೆ ಎಂದು ಹೇಳಿದ್ದಾರೆ..

ರಾಜ್ಯದಲ್ಲಿ ಇರುವ ಬರಗಾಲದ ಬಗ್ಗೆ ಕೂಡ ಶ್ರೀಗಳು (Kodi Mutt) ಭವಿಷ್ಯ ನುಡಿದಿದ್ದಾರೆ.. ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾಗುತ್ತದೆ ಎನ್ನುವುದನ್ನು ಶ್ರೀಗಳು ತಿಳಿಸಿದ್ದಾರೆ.. “ಕರ್ನಾಟಕದಲ್ಲಿ (Karnataka) ಪ್ರವಾಹದ ಪರಿಸ್ಥಿತಿ ಉಂಟಾಗುತ್ತದೆ. ಸಾಕಷ್ಟು ಸಾವು ನೋವು ಉಂಟಾಗಬಹುದು. ಭಗವಂತನ ಆಶೀರ್ವಾದ ಇದ್ದರೆ ಅದೆಲ್ಲದರಿಂದ ಪಾರಾಗಬಹುದು. ಈ ಎಲ್ಲಾ ಗಂಡಾಂತರಗಳು ನಡೆಯದೆ ಇರುವ ಹಾಗೆ ಮಾಡುವುದು ಸರ್ಕಾರದ ಕೈಯಲ್ಲಿದೆ..” ಎಂದು ಶ್ರೀಗಳು ಹೇಳಿದ್ದಾರೆ. ಇದನ್ನು ಓದಿ..Business Idea: ಸರ್ಕಾರವೇ ನಿಂತು ಸಹಾಯ ಮಾಡುವ ಈ ಬಿಸಿನೆಸ್ ಆರಂಭಿಸಿ- ಡಬಲ್ ಹಣ ಗಳಿಸಿ.

ವಿಶ್ವಮಟ್ಟದಲ್ಲಿ ಮೂರು ದೊಡ್ಡ ಗಂಡಾಂತರಗಳು ಕಾದಿದೆ..ಕೆಲ ದೇಶಗಳು ಮುಚ್ಚಿ ಹೋಗುತ್ತದೆ. ಅನೇಕ ಜನರು ಅಕಾಲಿಕ ಮರಣ ಹೊಂದಬಹುದು. ದಸರಾ ಹಬ್ಬ ಶುರುವಾಗಿ, ಸಂಕ್ರಾಂತಿ ಹಬ್ಬ ಬರುವವರೆಗೂ ದುರ್ಘಟನೆಗಳು ನಡೆಯಬಹುದು..ಈ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಿದರು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ, ಆಗುವ ತೊಂದರೆಗಳನ್ನು ತಪ್ಪಿಸಬಹುದು.. ಎಂದಿದ್ದಾರೆ. ಇದನ್ನು ಓದಿ..Electric Vehicles: ದಿಡೀರ್ ಎಂದು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಬಾರಿ ಕುಸಿತ- ಕಾರಣಗಳ ಸಮೇತ ವಿವರಣೆ.

Comments are closed.